ವಿವಿಧ ಇಲಾಖೆಗಳ ಹಲವು ಅಧಿಕಾರಿಗಳ ಅಕ್ರಮ ಸಂಪಾದನೆ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳವು ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ ವಿವರವನ್ನು ನೋಡಿದಾಗ ದಿಗ್ಭ್ರಮೆ ಉಂಟಾಯಿತು. ಇಂತಹ ದುರಾಸೆ, ದುರ್ಬುದ್ಧಿಯ ಅಧಿಕಾರಿಗಳಿಂದ ಪ್ರಾಮಾಣಿಕ ಅಧಿಕಾರಿಗಳೂ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ್ಪು ತಿಂದವರು ನೀರು ಕುಡಿದೇ ಕುಡಿಯುತ್ತಾರೆ ಸರಿ, ಆದರೆ ಆ ಭ್ರಷ್ಟರಿಗೆ ಶಿಕ್ಷೆಯ ಪ್ರಮಾಣ ಎಂತಹದ್ದು? ವಶಪಡಿಸಿಕೊಂಡಿರುವ ಆಸ್ತಿಯನ್ನು ಮುಂದೇನು ಮಾಡುತ್ತಾರೆ ಎಂಬಂಥ ಪ್ರಶ್ನೆಗಳು ಕಾಡುತ್ತವೆ. ಇವು ಕೇವಲ ಪ್ರಶ್ನೆಗಳಾಗಿ ಉಳಿಯದೆ ಉತ್ತರದ ದಿಕ್ಕಿನಲ್ಲಿ ಪ್ರವಹಿಸಲಿ ಎಂದು ಆಶಿಸೋಣ.