ಶುಕ್ರವಾರ, ಮಾರ್ಚ್ 31, 2023
33 °C

ವಾಚಕರ ವಾಣಿ| ನದಿ ನೀರು: ಆತಂಕ ಮೂಡಿಸುವ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿಯು (ಪ್ರ.ವಾ., ಜ. 26) ನಾಗರಿಕ ಸಮಾಜ ಆತಂಕಪಡುವ ಗಂಭೀರ ವಿಷಯ. ಜನರ ಜೀವನದ ಮೂಲ ನೀರು. ಬಹುತೇಕ ರೋಗಗಳ ಮೂಲ ಕೂಡ ನೀರು. ಆದಕಾರಣ ನೀರನ್ನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇವೋ ಅಷ್ಟು ಆರೋಗ್ಯದಿಂದ ಜೀವಸಂಕುಲ ಬದುಕಲು ಸಾಧ್ಯ. ಜಲಮೂಲಗಳು ಮಲಿನವಾಗದಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಜನಸಮುದಾಯದ ಮೇಲೆ ಇದೆ. ಸರ್ಕಾರ ಕೂಡ ಈ ದಿಸೆಯಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ತ್ಯಾಜ್ಯಗಳು ಕೆರೆ–ಕುಂಟೆ, ನದಿಗಳಿಗೆ ಸೇರದಂತೆ ನೋಡಿಕೊಳ್ಳಬೇಕು. ಕೈಗಾರಿಕೆಗಳಿಂದ ಹೊರಬಿಡುವ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಸಂಸ್ಕರಿಸಬೇಕು. ಜವಾಬ್ದಾರಿಯುತ ನಾಗರಿಕರಾಗಿ ನಾವು ಸರ್ಕಾರವನ್ನು ಸದಾ ಎಚ್ಚರಿಸುತ್ತಲೇ ಇರಬೇಕಾದ ಅಗತ್ಯವನ್ನು ಈ ವರದಿ ಸೂಚಿಸುತ್ತದೆ.

 - ಶಂಕರ್ ಜಿ.ಎಸ್., ದೊಡ್ಡಸಿದ್ಧವ್ವನಹಳ್ಳಿ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು