ಲೋಕಸಭಾ ಸದಸ್ಯರಾಗಿದ್ದ ಜನಸಂಘದ ಓ.ಪಿ. ತ್ಯಾಗಿ ಅವರು ‘50 ವರ್ಷಗಳ ಹಿಂದೆ’ ಲೋಕಸಭೆ
ಯಲ್ಲಿ ಮಾತನಾಡುತ್ತಾ (ಪ್ರ.ವಾ., ಡಿ. 16), ದಿವಂಗತರಾಗುವ ರಾಷ್ಟ್ರೀಯ ನಾಯಕರ ಜಾತಿ, ಮತಗಳನ್ನು ಪರಿಗಣಿಸದೆ ಜಾತ್ಯತೀತ ಸಮಾಧಿಯೊಂದನ್ನು ನಿರ್ಮಿಸಬೇಕೆಂದು ಸಲಹೆ ನೀಡಿದ್ದಾರೆ. ಇದು, ಆ ಕಾಲಕ್ಕೆ ಸಮಯೋಚಿತವೂ ಶ್ಲಾಘನೀಯವೂ ಎನಿಸಿದೆ. ಬದ್ಧತೆಯಿಂದ ಕೂಡಿದ ಅವರ ಜಾತ್ಯತೀತ ನಿಲುವು ಇಂದಿನ ಬಿಜೆಪಿ (ಹಿಂದಿನ ಜನಸಂಘ) ರಾಷ್ಟ್ರೀಯ ನಾಯಕರಿಗೆ ಮಾದರಿಯಾಗಲಿ. ತ್ಯಾಗಿಯವರನ್ನು ವಾಜಪೇಯಿ, ಜಯ ಪ್ರಕಾಶ್ ನಾರಾಯಣ, ಕೆಂಗಲ್ ಹನುಮಂತಯ್ಯ ಅವರಂತಹ ಮುತ್ಸದ್ದಿಗಳ ಸಾಲಿನಲ್ಲಿ ಪರಿಗಣಿಸಬೇಕಾಗಿದೆ.