<p class="Briefhead">ಆಂಧ್ರಪ್ರದೇಶದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ತೆಲುಗು ಮತ್ತು ಉರ್ದು ಮಾಧ್ಯಮದ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಆ ರಾಜ್ಯ ಸರ್ಕಾರ ನಿರ್ಧರಿಸಿರುವುದು ವರದಿಯಾಗಿದೆ. ತೆಲುಗನ್ನು ಒಂದು ಭಾಷೆಯನ್ನಾಗಿ ಮಾತ್ರ ಕಲಿಸಲಾಗುವುದಂತೆ. ಇದಕ್ಕೆ ಸಾರ್ವಜನಿಕರ ವಿರೋಧ ಇದ್ದರೂ ಅದನ್ನು ಲೆಕ್ಕಿಸದೆ ಸರ್ಕಾರವು ಜಾರಿಗೆ ತರಲು ಮುಂದಾಗಿದೆ. ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ!</p>.<p>ನಾಡು–ನುಡಿ ಸಂರಕ್ಷಣೆ, ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಸರ್ಕಾರಗಳು ಮಾಡುವ ಕೆಲಸ ಇಂಥದ್ದು! ಭಾಷೆಯ ಮಹತ್ವ ಅರಿಯದ, ಕಲಿಕಾ ಮಾಧ್ಯಮ, ಭಾಷಾ ಕಲಿಕೆಯ ವ್ಯತ್ಯಾಸ ಅರಿಯದ ರಾಜಕೀಯ ನಡೆ ಇದು. ರಾಜ್ಯದ ಆಡಳಿತಭಾಷೆಯಲ್ಲಿ ಸಮರ್ಪಕ ಶಿಕ್ಷಣ ನೀಡಲಾಗದ ಸರ್ಕಾರಗಳು, ಅದೇ ಶಿಕ್ಷಕ ವೃಂದದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೂಲಕ ಜನರನ್ನು ಉದ್ಧರಿಸಲು ಹೊರಟಿರುವುದು ವಿಪರ್ಯಾಸದ ಸಂಗತಿ. ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಸ್ಪಷ್ಟ ಭಾಷಾ ನೀತಿ ಇಲ್ಲದ ರಾಷ್ಟ್ರದಲ್ಲಿ ಇಂಥದ್ದೆಲ್ಲ ನಿರೀಕ್ಷಿತವೆ. ಹೊಸ ಶಿಕ್ಷಣ ನೀತಿ ಮೂಲಕ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಿ, ದೇಶಿ ಭಾಷೆಗಳಿಗೆ ಬಲ ತುಂಬಬೇಕಾಗಿದೆ.</p>.<p><strong>ವೆಂಕಟೇಶ ಮಾಚಕನೂರ, <span class="Designate">ಧಾರವಾಡ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಆಂಧ್ರಪ್ರದೇಶದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ತೆಲುಗು ಮತ್ತು ಉರ್ದು ಮಾಧ್ಯಮದ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಆ ರಾಜ್ಯ ಸರ್ಕಾರ ನಿರ್ಧರಿಸಿರುವುದು ವರದಿಯಾಗಿದೆ. ತೆಲುಗನ್ನು ಒಂದು ಭಾಷೆಯನ್ನಾಗಿ ಮಾತ್ರ ಕಲಿಸಲಾಗುವುದಂತೆ. ಇದಕ್ಕೆ ಸಾರ್ವಜನಿಕರ ವಿರೋಧ ಇದ್ದರೂ ಅದನ್ನು ಲೆಕ್ಕಿಸದೆ ಸರ್ಕಾರವು ಜಾರಿಗೆ ತರಲು ಮುಂದಾಗಿದೆ. ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ!</p>.<p>ನಾಡು–ನುಡಿ ಸಂರಕ್ಷಣೆ, ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಸರ್ಕಾರಗಳು ಮಾಡುವ ಕೆಲಸ ಇಂಥದ್ದು! ಭಾಷೆಯ ಮಹತ್ವ ಅರಿಯದ, ಕಲಿಕಾ ಮಾಧ್ಯಮ, ಭಾಷಾ ಕಲಿಕೆಯ ವ್ಯತ್ಯಾಸ ಅರಿಯದ ರಾಜಕೀಯ ನಡೆ ಇದು. ರಾಜ್ಯದ ಆಡಳಿತಭಾಷೆಯಲ್ಲಿ ಸಮರ್ಪಕ ಶಿಕ್ಷಣ ನೀಡಲಾಗದ ಸರ್ಕಾರಗಳು, ಅದೇ ಶಿಕ್ಷಕ ವೃಂದದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೂಲಕ ಜನರನ್ನು ಉದ್ಧರಿಸಲು ಹೊರಟಿರುವುದು ವಿಪರ್ಯಾಸದ ಸಂಗತಿ. ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಸ್ಪಷ್ಟ ಭಾಷಾ ನೀತಿ ಇಲ್ಲದ ರಾಷ್ಟ್ರದಲ್ಲಿ ಇಂಥದ್ದೆಲ್ಲ ನಿರೀಕ್ಷಿತವೆ. ಹೊಸ ಶಿಕ್ಷಣ ನೀತಿ ಮೂಲಕ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಿ, ದೇಶಿ ಭಾಷೆಗಳಿಗೆ ಬಲ ತುಂಬಬೇಕಾಗಿದೆ.</p>.<p><strong>ವೆಂಕಟೇಶ ಮಾಚಕನೂರ, <span class="Designate">ಧಾರವಾಡ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>