ಮೈಸೂರು ದಸರಾ ಉತ್ಸವದ ಅಂಗವಾಗಿ ಏರ್ಪಡಿಸುವ ‘ದಸರಾ ಕವಿಗೋಷ್ಠಿ’ಯಲ್ಲಿ ಕನ್ನಡ ಕವಿಗಳ ಜೊತೆಗೆ ಪ್ರತಿವರ್ಷವೂ ಕರ್ನಾಟಕದ ಇತರ ಪ್ರಮುಖ ಭಾಷೆಗಳ ಕವಿಗಳಿಗೂ ಅವಕಾಶ ನೀಡಲಾಗುತ್ತದೆ. ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳ ಕವಿತೆಗಳಿಗೆ ಈ ವರ್ಷ ಅವಕಾಶ ನೀಡಲಾಗಿದೆ. ಆದರೆ ಕರಾವಳಿ ಕರ್ನಾಟಕದ ಬಹುಮುಖ್ಯ ಭಾಷೆಯಾದ ಬ್ಯಾರಿ ಭಾಷೆಯನ್ನು ಕಡೆಗಣಿಸಲಾಗಿದ್ದು, ಬ್ಯಾರಿ ಕವಿಗಳಿಗೆ ಅವಕಾಶ ನೀಡಿಲ್ಲ. ಇಂತಹ ಮಲತಾಯಿ ಧೋರಣೆ ಸರಿಯಲ್ಲ.