<p>ಶಿಕ್ಷಣ ಮತ್ತು ಅಭಿವೃದ್ಧಿಗೆ ನಂಟು ಇರುತ್ತದೆ. ಶಿಕ್ಷಣದಿಂದ ಬಡತನ ನಿರ್ಮೂಲನ, ಆರೋಗ್ಯ ವೃದ್ಧಿ, ಬುದ್ಧಿಶಕ್ತಿ, ಮಾನಸಿಕ ಚಾತುರ್ಯಗಳ ಬೆಳವಣಿಗೆ ಸಾಧ್ಯ. ಇವುಗಳ ಜೊತೆಗೆ ಇಂಗ್ಲಿಷ್ ಶಿಕ್ಷಣ ಹೆಚ್ಚಿರುವ ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಸಹಕಾರಿ. ಹೀಗಿರುವಾಗ, ಶಿಕ್ಷಣ ಕ್ಷೇತ್ರವೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ದೇಶ ಅಭಿವೃದ್ಧಿಯಾಗುವುದೇ? ದೇಶದ ರಕ್ಷಣೆಗೆ ರಕ್ಷಣಾ ಪಡೆ, ಕಾನೂನು ಪರಿಪಾಲನೆಗೆ ಪೋಲಿಸ್ ಪಡೆ ಅವಶ್ಯವಾಗಿರುವಾಗ ಪೊಲೀಸ್ ಇಲಾಖೆಗೆ ನಿಯೋಜಿತರಾಗುವವರೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ಆಂತರಿಕ ಶಾಂತಿ ಪರಿಪಾಲನೆ ಸಾಧ್ಯವೇ?</p>.<p>ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದೆ, ರಾಜಕೀಯ ಪಕ್ಷಗಳು ವೈಯಕ್ತಿಕ ಕೆಸರೆರಚಾಟದಲ್ಲಿ ತೊಡಗುವುದು ಸರಿಯೇ? ಶಿಕ್ಷಣ ಮತ್ತು ರಕ್ಷಣೆಯ ವಿಷಯಗಳನ್ನು ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಿರ್ಧರಿಸಿ ದೇಶವನ್ನು ರಕ್ಷಿಸುವುದಲ್ಲದೆ, ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಬದ್ಧರಾಗಬೇಕಲ್ಲವೇ? ಇಷ್ಟು ದೊಡ್ಡ ದೇಶದ ಭಾಗಶಃ ಜನರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿರುವಾಗ, ಉಳಿದ ಕೆಳವರ್ಗದವರನ್ನೂ ವಂಚಿತರನ್ನೂ ಅನಕ್ಷರಸ್ಥರನ್ನೂ ಹಿಂದುಳಿದವರನ್ನೂ ಎಲ್ಲ ಕ್ಷೇತ್ರಗಳಲ್ಲಿ ಬೆಳೆಸಿದರೆ ವಿಶ್ವದಲ್ಲಿ ಮಾನ್ಯತೆ ಗಳಿಸಬಹುದಲ್ಲವೇ?</p>.<p><em><strong>ಕೆ.ಎನ್.ಭಗವಾನ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿಕ್ಷಣ ಮತ್ತು ಅಭಿವೃದ್ಧಿಗೆ ನಂಟು ಇರುತ್ತದೆ. ಶಿಕ್ಷಣದಿಂದ ಬಡತನ ನಿರ್ಮೂಲನ, ಆರೋಗ್ಯ ವೃದ್ಧಿ, ಬುದ್ಧಿಶಕ್ತಿ, ಮಾನಸಿಕ ಚಾತುರ್ಯಗಳ ಬೆಳವಣಿಗೆ ಸಾಧ್ಯ. ಇವುಗಳ ಜೊತೆಗೆ ಇಂಗ್ಲಿಷ್ ಶಿಕ್ಷಣ ಹೆಚ್ಚಿರುವ ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಸಹಕಾರಿ. ಹೀಗಿರುವಾಗ, ಶಿಕ್ಷಣ ಕ್ಷೇತ್ರವೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ದೇಶ ಅಭಿವೃದ್ಧಿಯಾಗುವುದೇ? ದೇಶದ ರಕ್ಷಣೆಗೆ ರಕ್ಷಣಾ ಪಡೆ, ಕಾನೂನು ಪರಿಪಾಲನೆಗೆ ಪೋಲಿಸ್ ಪಡೆ ಅವಶ್ಯವಾಗಿರುವಾಗ ಪೊಲೀಸ್ ಇಲಾಖೆಗೆ ನಿಯೋಜಿತರಾಗುವವರೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ಆಂತರಿಕ ಶಾಂತಿ ಪರಿಪಾಲನೆ ಸಾಧ್ಯವೇ?</p>.<p>ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದೆ, ರಾಜಕೀಯ ಪಕ್ಷಗಳು ವೈಯಕ್ತಿಕ ಕೆಸರೆರಚಾಟದಲ್ಲಿ ತೊಡಗುವುದು ಸರಿಯೇ? ಶಿಕ್ಷಣ ಮತ್ತು ರಕ್ಷಣೆಯ ವಿಷಯಗಳನ್ನು ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಿರ್ಧರಿಸಿ ದೇಶವನ್ನು ರಕ್ಷಿಸುವುದಲ್ಲದೆ, ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಬದ್ಧರಾಗಬೇಕಲ್ಲವೇ? ಇಷ್ಟು ದೊಡ್ಡ ದೇಶದ ಭಾಗಶಃ ಜನರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿರುವಾಗ, ಉಳಿದ ಕೆಳವರ್ಗದವರನ್ನೂ ವಂಚಿತರನ್ನೂ ಅನಕ್ಷರಸ್ಥರನ್ನೂ ಹಿಂದುಳಿದವರನ್ನೂ ಎಲ್ಲ ಕ್ಷೇತ್ರಗಳಲ್ಲಿ ಬೆಳೆಸಿದರೆ ವಿಶ್ವದಲ್ಲಿ ಮಾನ್ಯತೆ ಗಳಿಸಬಹುದಲ್ಲವೇ?</p>.<p><em><strong>ಕೆ.ಎನ್.ಭಗವಾನ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>