ರಾಷ್ಟ್ರಮಟ್ಟದಲ್ಲಿ ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಅವರಂತಹ ಅನೇಕರಿದ್ದಾರೆ. ಆದರೆ ಹೀಗೆ ಬದ್ಧತೆಯುಳ್ಳ ಅನೇಕ ನಾಯಕರದು ಗುಡುಗಿನ ಭಾಷಣ ಶೈಲಿಯಲ್ಲ. ಆದರೆ, ಬೆಂಕಿ ಕಾರುವ ಭಾಷಣ ಶೈಲಿಗೆ ನಮ್ಮ ಮತದಾರರು ಬಹಳ ದಿನ ಮಾರುಹೋಗುವುದೂ ಇಲ್ಲ. ಭಾರತ್ ಜೋಡೊ ಪಾದಯಾತ್ರೆಯು ಇನ್ನಷ್ಟು ಹೊಸ ನಾಯಕರು ಸೈದ್ಧಾಂತಿಕ ಸ್ಪಷ್ಟತೆ ಪಡೆಯಲು ನೆರವಾದರೆ, ಅದರಿಂದ ಪಕ್ಷಕ್ಕೆ ಒಂದಷ್ಟು ಒಳಿತಾಗಬಹುದು.