ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸೈದ್ಧಾಂತಿಕ ಸ್ಪಷ್ಟತೆ ಇತರರಲ್ಲೂ ಇದೆ

Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ರಾಹುಲ್ ಮತ್ತು ರಾಜಕೀಯ ತಂತ್ರಗಾರಿಕೆ’ ಎಂಬ ದಿನೇಶ್ ಅಮಿನ್ ಮಟ್ಟು ಅವರ ಲೇಖನದಲ್ಲಿ (ಪ್ರ.ವಾ., ಸೆ. 29) ಒಂದು ಕಡೆ, ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಇರುವುದು ರಾಹುಲ್ ಗಾಂಧಿ ಅವರಿಗೆ ಮಾತ್ರ ಎಂಬ ಉಲ್ಲೇಖ ಇದೆ. ಅದು ಸರಿಯಲ್ಲ. ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಅನೇಕ ನಾಯಕರು ನಮ್ಮ ರಾಜ್ಯದಲ್ಲಿಯೇ ಸಿಗುತ್ತಾರೆ.

ರಾಷ್ಟ್ರಮಟ್ಟದಲ್ಲಿ ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಅವರಂತಹ ಅನೇಕರಿದ್ದಾರೆ. ಆದರೆ ಹೀಗೆ ಬದ್ಧತೆಯುಳ್ಳ ಅನೇಕ ನಾಯಕರದು ಗುಡುಗಿನ ಭಾಷಣ ಶೈಲಿಯಲ್ಲ. ಆದರೆ, ಬೆಂಕಿ ಕಾರುವ ಭಾಷಣ ಶೈಲಿಗೆ ನಮ್ಮ ಮತದಾರರು ಬಹಳ ದಿನ ಮಾರುಹೋಗುವುದೂ ಇಲ್ಲ. ಭಾರತ್‌ ಜೋಡೊ ಪಾದಯಾತ್ರೆಯು ಇನ್ನಷ್ಟು ಹೊಸ ನಾಯಕರು ಸೈದ್ಧಾಂತಿಕ ಸ್ಪಷ್ಟತೆ ಪಡೆಯಲು ನೆರವಾದರೆ, ಅದರಿಂದ ಪಕ್ಷಕ್ಕೆ ಒಂದಷ್ಟು ಒಳಿತಾಗಬಹುದು.

⇒ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT