ಪ್ರಾಯಶಃ ಇದಕ್ಕೆ ಪ್ರಮುಖ ಕಾರಣ, ಕಂಗನಾಗೆ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಹಲವರಿಗೆ, ಅವರೇ ಹೇಳಿಕೊಂಡಂತೆ ಬಾಳಾ ಠಾಕ್ರೆ ಆದರ್ಶಪ್ರಾಯ. ಬಾಳಾ ಠಾಕ್ರೆ ಪ್ರೇರಿತ ಶಿವಸೈನಿಕರು ದಕ್ಷಿಣ ಭಾರತೀಯರನ್ನು, ಉತ್ತರ ಭಾರತೀಯರನ್ನು, ಗಿರಣಿ ಕಾರ್ಮಿಕ ಸಂಘದ ಸದಸ್ಯರನ್ನು, ಅಲ್ಪಸಂಖ್ಯಾತರನ್ನು ಬೆದರಿಸುತ್ತಿದ್ದಾಗ, ಇಂದು ಕಂಗನಾರನ್ನು ಬೆಂಬಲಿಸುತ್ತಿರುವ ಪಕ್ಷ ಹಾಗೂ ಅದರ ಬೆಂಬಲಿಗರು ಠಾಕ್ರೆಯವರ ಜೊತೆಯಲ್ಲಿದ್ದರು. ಬಹುಕಾಲ ಅಧಿಕಾರವನ್ನು ಸಹ ಹಂಚಿಕೊಂಡಿದ್ದರು. ಅಂದು ಸಹ್ಯವಾಗಿದ್ದ ಶಿವಸೇನಾದ ಗೂಂಡಾಗಿರಿ ಇಂದು ಅಸಹನೀಯವೆನಿಸುವುದಕ್ಕೆ ಪ್ರಮುಖ ಕಾರಣ, ಶಿವಸೇನಾವು ಬಿಜೆಪಿಯೇತರ ಪಕ್ಷಗಳೊಡನೆ ಕೈಜೋಡಿಸಿ ಮುಂಬೈಯಲ್ಲೇ ಇವರನ್ನು ತಬ್ಬಲಿಯಾಗಿಸಿದ್ದು.