ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮುಂಬೈ ನಿಯಂತ್ರಣಕ್ಕಾಗಿ ಜಟಾಪಟಿ

Last Updated 17 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಚಿತ್ರನಟಿ ಕಂಗನಾ ರನೌತ್‌ ವಿಷಯದಲ್ಲಿ ಎ.ಸೂರ್ಯಪ್ರಕಾಶ್‌ ಅವರು ಶಿವಸೇನಾದ ಗೂಂಡಾಗಿರಿಯನ್ನು ಖಂಡಿಸಿ ಬರೆದಿರುವುದು ಸರಿಯಾಗಿದೆ (ಪ್ರ.ವಾ., ಸೆ. 16). ಆದರೆ, ಶಿವಸೇನಾವನ್ನು ಸ್ಥಾಪಿಸಿ ಅದನ್ನು ಫ್ಯಾಸಿಸ್ಟ್ ಶಕ್ತಿಯಾಗಿ ಬೆಳೆಸಿ, ಮುಂಬೈ ತನ್ನ ಜಹಗೀರೆಂಬಂತೆ ವರ್ತಿಸಿದ ಬಾಳಾ ಠಾಕ್ರೆ ಅವರ ಬಗ್ಗೆ ಲೇಖಕರು ಪ್ರಸ್ತಾಪಿಸದಿರುವುದು ಕುತೂಹಲಕಾರಿ.

ಪ್ರಾಯಶಃ ಇದಕ್ಕೆ ಪ್ರಮುಖ ಕಾರಣ, ಕಂಗನಾಗೆ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಹಲವರಿಗೆ, ಅವರೇ ಹೇಳಿಕೊಂಡಂತೆ ಬಾಳಾ ಠಾಕ್ರೆ ಆದರ್ಶಪ್ರಾಯ. ಬಾಳಾ ಠಾಕ್ರೆ ಪ್ರೇರಿತ ಶಿವಸೈನಿಕರು ದಕ್ಷಿಣ ಭಾರತೀಯರನ್ನು, ಉತ್ತರ ಭಾರತೀಯರನ್ನು, ಗಿರಣಿ ಕಾರ್ಮಿಕ ಸಂಘದ ಸದಸ್ಯರನ್ನು, ಅಲ್ಪಸಂಖ್ಯಾತರನ್ನು ಬೆದರಿಸುತ್ತಿದ್ದಾಗ, ಇಂದು ಕಂಗನಾರನ್ನು ಬೆಂಬಲಿಸುತ್ತಿರುವ ಪಕ್ಷ ಹಾಗೂ ಅದರ ಬೆಂಬಲಿಗರು ಠಾಕ್ರೆಯವರ ಜೊತೆಯಲ್ಲಿದ್ದರು. ಬಹುಕಾಲ ಅಧಿಕಾರವನ್ನು ಸಹ ಹಂಚಿಕೊಂಡಿದ್ದರು. ಅಂದು ಸಹ್ಯವಾಗಿದ್ದ ಶಿವಸೇನಾದ ಗೂಂಡಾಗಿರಿ ಇಂದು ಅಸಹನೀಯವೆನಿಸುವುದಕ್ಕೆ ಪ್ರಮುಖ ಕಾರಣ, ಶಿವಸೇನಾವು ಬಿಜೆಪಿಯೇತರ ಪಕ್ಷಗಳೊಡನೆ ಕೈಜೋಡಿಸಿ ಮುಂಬೈಯಲ್ಲೇ ಇವರನ್ನು ತಬ್ಬಲಿಯಾಗಿಸಿದ್ದು.

ಇವರ ಬೂಟಾಟಿಕೆಗೆ ಪ್ರಮುಖ ನಿದರ್ಶನ, ಕೆಲವೇ ತಿಂಗಳುಗಳ ಹಿಂದೆ ಕಮಿಡಿಯನ್‌ ಅಗ್ರಿಮಾ ಜೊಷೂವಾ ಅವರ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳವನ್ನು ಕ್ಷುಲ್ಲಕ ಕಾರಣಕ್ಕಾಗಿ ಶಿವಸೈನಿಕರು ಧ್ವಂಸಗೊಳಿಸಿದಾಗ, ಅದನ್ನು ಇದೇ ಗುಂಪು ಯಾವುದೇ ಅಳುಕಿಲ್ಲದೆ ಸಮರ್ಥಿಸಿಕೊಂಡಿದ್ದು. ಮುಂಬೈಯನ್ನು ಯಾರು ನಿಯಂತ್ರಿಸಬೇಕೆಂಬ ಕಾರಣಕ್ಕೆ ಕಂಗನಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆಯೇ ವಿನಾ ಮುಂಬೈ ಎಲ್ಲ ಭಾರತೀಯರಿಗೂ ಮುಕ್ತವಾಗಿರಬೇಕೆಂಬ ಕಾರಣಕ್ಕಾಗಿ ಅಲ್ಲ.

ಸುನೀಲ ನಾಯಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT