ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರರಿಂದ ಪೋಷಕರ ಕೊಲೆ | ಮಕ್ಕಳ ಕೊರತೆಗಳ ಬಗ್ಗೆ ಚಿಂತನೆ ನಡೆಯಲಿ

Last Updated 13 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ತಮ್ಮ ಸ್ವಚ್ಛಂದದ ಬದುಕಿಗೆ ಅಡ್ಡಿಯಾದ ಅಪ್ಪಂದಿರನ್ನೇ ಮಕ್ಕಳು ಕೊಂದು ಹಾಕಿರುವ ಘಟನೆಗಳು ಬೆಂಗಳೂರು, ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿವೆ. ಹಾಗಿದ್ದರೆ ನಾವು ಎಲ್ಲಿ ಎಡವಿದ್ದೇವೆ, ಎಲ್ಲಿಗೆ ಬಂದು ನಿಂತಿದ್ದೇವೆ, ಮತ್ತೆಲ್ಲಿಗೆ ತಲುಪುತ್ತೇವೆ ಎಂದು ನೆನೆದರೆ ಭಯವಾಗುತ್ತದೆ. ಈ ಮಕ್ಕಳು ಹಳ್ಳ ಹಿಡಿದಿರುವ ನೈತಿಕತೆಯ ರೂಪಕಗಳಷ್ಟೇ. ಇಂತಹ ಮನಃಸ್ಥಿತಿಯವರು ಸಮಾಜದಲ್ಲಿ ಬಹುಮಂದಿ ಸಿಗುತ್ತಾರೆ. ಈ ಪ್ರಕರಣಗಳಲ್ಲಿ ಮಕ್ಕಳಿಗೆ ಬೇಕಿದ್ದ ನೈತಿಕ ಶಿಕ್ಷಣ, ಹೆತ್ತವರೊಡನೆ ಭಾವನಾತ್ಮಕ ಸಂಬಂಧ, ಸಮಾಜದೊಂದಿಗಿನ ಒಡನಾಟದ ಕೊರತೆಗಳು ಎದ್ದು ಕಾಣುತ್ತವೆ. ಹಾಗಿದ್ದರೆ ಇವೆಲ್ಲವನ್ನೂ ಈ ತಲೆಮಾರಿನ ಮಕ್ಕಳಿಗೆ ಸಮರ್ಪಕವಾಗಿ ತುಂಬಬೇಕಿದ್ದ ಕಾರ್ಯ ಯಾರದ್ದು? ಇದು ಸಮಾಜ, ಹೆತ್ತವರು, ಶಾಲೆಯವರು ಎಲ್ಲರೂ ಚಿಂತಿಸಬೇಕಾದ ವಿಚಾರ.

–ಎಸ್. ಮಲ್ಲಿಕ್ ಭರತ್, ಸಾಸಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT