<p>ಉಡುಪಿಯ ಐಕಳದಲ್ಲಿ ಇತ್ತೀಚೆಗೆ ನಡೆದ ಕಂಬಳದ ಓಟದಲ್ಲಿ ಶ್ರೀನಿವಾಸ ಗೌಡ ಎಂಬುವರು ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರಿಗಿಂತಲೂ ವೇಗವಾಗಿ ಓಡಿ ಗುರಿ ತಲುಪಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶ<br />ಗಳಲ್ಲಿ ಇರುವ ಇಂತಹ ಓಟಗಾರರು ಮತ್ತು ಆಟಗಾರರು ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತಾರೆ. ಶಾಲಾ- ಕಾಲೇಜುಗಳಲ್ಲಿ ಓದುತ್ತಿರುವವರಿಗೆ ಮುಂದೆ ಬರಲು ಸ್ವಲ್ಪಮಟ್ಟಿಗಾದರೂ ಅವಕಾಶ ಇರುತ್ತದೆ. ಅವಿದ್ಯಾವಂತರಿಗೆ ಅದೂ ಇಲ್ಲ.</p>.<p>ಇನ್ನು ಕ್ರೀಡಾಕೂಟಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಯ ಕಣ್ಣಾಮುಚ್ಚಾಲೆ ಕೇಳುವುದೇ ಬೇಡ. ಅದು ತರಬೇತುದಾರರ ಕೃಪಾಶೀರ್ವಾದ, ಸಂಘಟಕರ ದಯೆ, ರಾಜಕೀಯ ಶಿಫಾರಸು... ಹೀಗೆ ಹಲವಾರು ಅಡೆತಡೆಗಳನ್ನು ಜಿಗಿದು, ಓಡಿ, ಗುರಿ<br />ಮುಟ್ಟಬೇಕಾಗುತ್ತದೆ. ಇಂತಹ ಓಟದಲ್ಲಿ ನಿಜವಾದ ಸಾಮರ್ಥ್ಯವುಳ್ಳ ಆಟಗಾರರು ಹಿಂದೆ ಬೀಳುವ ಸಾಧ್ಯತೆ ಹೆಚ್ಚು. ಗ್ರಾಮೀಣ ಪ್ರದೇಶ<br />ಗಳಲ್ಲಿ ಇಂತಹ ಹತ್ತಾರು ಉಸೇನ್ ಬೋಲ್ಟ್ರಿದ್ದಾರೆ. ಅವರ ಸಾಮರ್ಥ್ಯವನ್ನು ತರಬೇತುದಾರರು ಗುರುತಿಸಲಿ ಮತ್ತು ಮುಕ್ತ ಅವಕಾಶ ನೀಡಲಿ.</p>.<p><em><strong>-ಗಣಪತಿ ನಾಯ್ಕ,ಕಾನಗೋಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿಯ ಐಕಳದಲ್ಲಿ ಇತ್ತೀಚೆಗೆ ನಡೆದ ಕಂಬಳದ ಓಟದಲ್ಲಿ ಶ್ರೀನಿವಾಸ ಗೌಡ ಎಂಬುವರು ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರಿಗಿಂತಲೂ ವೇಗವಾಗಿ ಓಡಿ ಗುರಿ ತಲುಪಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶ<br />ಗಳಲ್ಲಿ ಇರುವ ಇಂತಹ ಓಟಗಾರರು ಮತ್ತು ಆಟಗಾರರು ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತಾರೆ. ಶಾಲಾ- ಕಾಲೇಜುಗಳಲ್ಲಿ ಓದುತ್ತಿರುವವರಿಗೆ ಮುಂದೆ ಬರಲು ಸ್ವಲ್ಪಮಟ್ಟಿಗಾದರೂ ಅವಕಾಶ ಇರುತ್ತದೆ. ಅವಿದ್ಯಾವಂತರಿಗೆ ಅದೂ ಇಲ್ಲ.</p>.<p>ಇನ್ನು ಕ್ರೀಡಾಕೂಟಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಯ ಕಣ್ಣಾಮುಚ್ಚಾಲೆ ಕೇಳುವುದೇ ಬೇಡ. ಅದು ತರಬೇತುದಾರರ ಕೃಪಾಶೀರ್ವಾದ, ಸಂಘಟಕರ ದಯೆ, ರಾಜಕೀಯ ಶಿಫಾರಸು... ಹೀಗೆ ಹಲವಾರು ಅಡೆತಡೆಗಳನ್ನು ಜಿಗಿದು, ಓಡಿ, ಗುರಿ<br />ಮುಟ್ಟಬೇಕಾಗುತ್ತದೆ. ಇಂತಹ ಓಟದಲ್ಲಿ ನಿಜವಾದ ಸಾಮರ್ಥ್ಯವುಳ್ಳ ಆಟಗಾರರು ಹಿಂದೆ ಬೀಳುವ ಸಾಧ್ಯತೆ ಹೆಚ್ಚು. ಗ್ರಾಮೀಣ ಪ್ರದೇಶ<br />ಗಳಲ್ಲಿ ಇಂತಹ ಹತ್ತಾರು ಉಸೇನ್ ಬೋಲ್ಟ್ರಿದ್ದಾರೆ. ಅವರ ಸಾಮರ್ಥ್ಯವನ್ನು ತರಬೇತುದಾರರು ಗುರುತಿಸಲಿ ಮತ್ತು ಮುಕ್ತ ಅವಕಾಶ ನೀಡಲಿ.</p>.<p><em><strong>-ಗಣಪತಿ ನಾಯ್ಕ,ಕಾನಗೋಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>