<p>ದೇಶದಲ್ಲಿ ನಾಲ್ಕು ರಾಜಧಾನಿಗಳು ರಚನೆಯಾಗಬೇಕು ಮತ್ತು ಪಾಳಿಯ ಪ್ರಕಾರ ದೇಶದ ವಿವಿಧೆಡೆ ಸಂಸತ್ತಿನ ಅಧಿವೇಶನಗಳನ್ನು ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ರಾಜಧಾನಿಗಳು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತಗಳಲ್ಲಿ ಇರಬೇಕು ಎಂದೂ ಅವರು ಬೇಡಿಕೆ ಇಟ್ಟಿದ್ದಾರೆ. ರಾಜಧಾನಿ ದೆಹಲಿಗೇ ಏಕೆ ಸೀಮಿತವಾಗಬೇಕು ಎಂದು ಪ್ರಶ್ನಿಸಿದ್ದಾರೆ.</p>.<p>ಮಮತಾ ಅವರ ಈ ಬೇಡಿಕೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ. ದೆಹಲಿ ದೂರ, ಪ್ರತಿಯೊಂದಕ್ಕೂ ದೆಹಲಿಯತ್ತ ನೋಡಬೇಕೇ ಎಂದು ಗೊಣಗುವ ಪರಿಸ್ಥಿತಿಯಲ್ಲಿ, ಅಧಿಕಾರದ ವಿಕೇಂದ್ರೀಕರಣ ಮತ್ತು ದೇಶದಾದ್ಯಂತ ಜನರ ಅನುಕೂಲದ ದೃಷ್ಟಿಯಲ್ಲಿ ಈ ಬೇಡಿಕೆ ಬಲವನ್ನು ಪಡೆದುಕೊಂಡರೆ ಆಶ್ಚರ್ಯವಿಲ್ಲ. ವರ್ಷಗಳ ಹಿಂದೆ ಜನರ ಅನುಕೂಲಕ್ಕಾಗಿ ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆ ಕೇಳಿಬಂದಿತ್ತು. ಈಗ ನಾಲ್ಕು ರಾಜಧಾನಿಗಳನ್ನು ರಚಿಸಬೇಕು ಎನ್ನುವ ಬೇಡಿಕೆಯೊಂದಿಗೆ ಈ ಬೇಡಿಕೆಯೂ ಮುನ್ನೆಲೆಗೆ ಬರಬಹುದು. ಹಾಗೆಯೇ ಮಮತಾ ಅವರ ಬೇಡಿಕೆಯಲ್ಲಿ ಕೆಲವರು ಅಗೋಚರ ರಾಜಕೀಯವನ್ನು ನೋಡುವುದನ್ನು ತಳ್ಳಿಹಾಕಲಾಗದು.</p>.<p><strong>- ರಮಾನಂದ ಶರ್ಮಾ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದಲ್ಲಿ ನಾಲ್ಕು ರಾಜಧಾನಿಗಳು ರಚನೆಯಾಗಬೇಕು ಮತ್ತು ಪಾಳಿಯ ಪ್ರಕಾರ ದೇಶದ ವಿವಿಧೆಡೆ ಸಂಸತ್ತಿನ ಅಧಿವೇಶನಗಳನ್ನು ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ರಾಜಧಾನಿಗಳು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತಗಳಲ್ಲಿ ಇರಬೇಕು ಎಂದೂ ಅವರು ಬೇಡಿಕೆ ಇಟ್ಟಿದ್ದಾರೆ. ರಾಜಧಾನಿ ದೆಹಲಿಗೇ ಏಕೆ ಸೀಮಿತವಾಗಬೇಕು ಎಂದು ಪ್ರಶ್ನಿಸಿದ್ದಾರೆ.</p>.<p>ಮಮತಾ ಅವರ ಈ ಬೇಡಿಕೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ. ದೆಹಲಿ ದೂರ, ಪ್ರತಿಯೊಂದಕ್ಕೂ ದೆಹಲಿಯತ್ತ ನೋಡಬೇಕೇ ಎಂದು ಗೊಣಗುವ ಪರಿಸ್ಥಿತಿಯಲ್ಲಿ, ಅಧಿಕಾರದ ವಿಕೇಂದ್ರೀಕರಣ ಮತ್ತು ದೇಶದಾದ್ಯಂತ ಜನರ ಅನುಕೂಲದ ದೃಷ್ಟಿಯಲ್ಲಿ ಈ ಬೇಡಿಕೆ ಬಲವನ್ನು ಪಡೆದುಕೊಂಡರೆ ಆಶ್ಚರ್ಯವಿಲ್ಲ. ವರ್ಷಗಳ ಹಿಂದೆ ಜನರ ಅನುಕೂಲಕ್ಕಾಗಿ ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆ ಕೇಳಿಬಂದಿತ್ತು. ಈಗ ನಾಲ್ಕು ರಾಜಧಾನಿಗಳನ್ನು ರಚಿಸಬೇಕು ಎನ್ನುವ ಬೇಡಿಕೆಯೊಂದಿಗೆ ಈ ಬೇಡಿಕೆಯೂ ಮುನ್ನೆಲೆಗೆ ಬರಬಹುದು. ಹಾಗೆಯೇ ಮಮತಾ ಅವರ ಬೇಡಿಕೆಯಲ್ಲಿ ಕೆಲವರು ಅಗೋಚರ ರಾಜಕೀಯವನ್ನು ನೋಡುವುದನ್ನು ತಳ್ಳಿಹಾಕಲಾಗದು.</p>.<p><strong>- ರಮಾನಂದ ಶರ್ಮಾ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>