ಈ ರೀತಿಯ ಬದಲಾವಣೆ ಭವಿಷ್ಯದಲ್ಲಿ ಕೋಲಾಹಲಕ್ಕೆ ಅವಕಾಶ ನೀಡುತ್ತದೆ. ಪ್ರತಿಯೊಂದು ಜಾತಿ ಜನಾಂಗವೂ ತಮ್ಮ ತಮ್ಮ ಧರ್ಮಗುರುವಿನ ಅಥವಾ ಮಠಾಧೀಶರ ಭಾವಚಿತ್ರಗಳನ್ನು ನೋಟಿನ ಮೇಲೆ ಮುದ್ರಿಸುವಂತೆ ಒತ್ತಾಯಿಸಬಹುದು. ಅಲ್ಲದೆ ಮಹಾತ್ಮರ ಭಾವಚಿತ್ರ ಬದಲಾವಣೆಯ ಹಿಂದೆ ಮತೀಯವಾದಿ ಜನರ ಕುತಂತ್ರ ಇರುವ ಸಾಧ್ಯತೆಗಳೂ ಇರಬಹುದು. ಈಗ ಬದಲಾವಣೆಯಾದರೆ ಮುಂದೊಂದು ದಿನ ತಮ್ಮ ಧಾರ್ಮಿಕ ನಾಯಕ ಅಥವಾ ರಾಜಕೀಯ ಮುಖಂಡನ ಚಿತ್ರವನ್ನು ಮುದ್ರಿಸಲು ಅವಕಾಶ ದೊರೆಯುವುದೆಂಬ ದೂರದೃಷ್ಟಿ ಇರಬಹುದು. ಇವೆಲ್ಲಕ್ಕೂ ತೆರೆ ಎಳೆದಿರುವ ರಿಸರ್ವ್ ಬ್ಯಾಂಕಿನ ಕ್ರಮ ಅಭಿನಂದನಾರ್ಹ.