<p>ಪಿಎಂ– ಕೇರ್ಸ್ ನಿಧಿಯು ಆರಂಭದಿಂದಲೂ ಗೊಂದಲದ ಗೂಡಾಗಿದೆ. ದೇಣಿಗೆ ನೀಡಿದವರ ವಿವರ<br />ಬಹಿರಂಗಪಡಿಸದೇ ಇರುವುದರಿಂದ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಹಾಗೂ ಅವರ ಹಣದ ಮೂಲ ಏನು ಎಂಬುದನ್ನು ಮರೆಮಾಚಿದಂತಾಗುತ್ತದೆ. ಟ್ರಸ್ಟಿಗಳು ಹಾಗೂ ಸಲಹೆಗಾರರಾಗಿ ನೇಮಕಗೊಂಡವರು ಗಣ್ಯರು ಎಂದಮಾತ್ರಕ್ಕೆ ಈ ನಿಧಿಗೆ ವಿಶ್ವಾಸಾರ್ಹತೆ ಬರುವುದಿಲ್ಲ. ಈ ನಿಧಿಯ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ಮತ್ತು ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆ ಮಾಡಿಸಲು ಸರ್ಕಾರ ನಿರಾಕರಿಸಿರುವುದು ನಿಧಿಯ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.</p>.<p>ಸಾರ್ವಜನಿಕರೇ ನೀಡಿದ ಹಣದ ವಿವರವನ್ನು ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ಕೇಳುವುದು ಮಾಹಿತಿ ಹಕ್ಕಿನ ವ್ಯಾಪ್ತಿಯ ಒಳಗೆ ಬರುತ್ತದೆ. ಇದನ್ನು ಸ್ಥಾಪಿಸಿರುವುದು ಖಾಸಗಿ ವ್ಯಕ್ತಿಗಳು ಅಲ್ಲ. ಪ್ರಧಾನಿಯವರೇ ಇದರ ಅಧ್ಯಕ್ಷರು. ಇದಕ್ಕೆ ಹಣ ನೀಡಿರುವುದು ಸಾರ್ವಜನಿಕರು. ಆದ್ದರಿಂದ ಈ ಕುರಿತು ಜನರಿಗೆ ಉತ್ತರದಾಯಿ<br />ಯಾಗಿರುವುದು ಸರ್ಕಾರದ ಬಾಧ್ಯತೆ ಆಗಿರುತ್ತದೆ. ಈ ನಿಧಿಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಪ್ರಧಾನಿ ಕಚೇರಿಯು ಸ್ಪಷ್ಟ ಉತ್ತರ ನೀಡುವ ಮೂಲಕ ನಿಧಿಯ ಕುರಿತ ಗೊಂದಲಗಳಿಗೆ ಪರದೆ ಎಳೆಯಬೇಕಾಗಿದೆ.</p>.<p>ನಿರಂಜನ್ ಮೂರ್ತಿ ಆರ್.ಕೆ.,ಶಿವಮೊಗ್ಗ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಎಂ– ಕೇರ್ಸ್ ನಿಧಿಯು ಆರಂಭದಿಂದಲೂ ಗೊಂದಲದ ಗೂಡಾಗಿದೆ. ದೇಣಿಗೆ ನೀಡಿದವರ ವಿವರ<br />ಬಹಿರಂಗಪಡಿಸದೇ ಇರುವುದರಿಂದ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಹಾಗೂ ಅವರ ಹಣದ ಮೂಲ ಏನು ಎಂಬುದನ್ನು ಮರೆಮಾಚಿದಂತಾಗುತ್ತದೆ. ಟ್ರಸ್ಟಿಗಳು ಹಾಗೂ ಸಲಹೆಗಾರರಾಗಿ ನೇಮಕಗೊಂಡವರು ಗಣ್ಯರು ಎಂದಮಾತ್ರಕ್ಕೆ ಈ ನಿಧಿಗೆ ವಿಶ್ವಾಸಾರ್ಹತೆ ಬರುವುದಿಲ್ಲ. ಈ ನಿಧಿಯ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ಮತ್ತು ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆ ಮಾಡಿಸಲು ಸರ್ಕಾರ ನಿರಾಕರಿಸಿರುವುದು ನಿಧಿಯ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.</p>.<p>ಸಾರ್ವಜನಿಕರೇ ನೀಡಿದ ಹಣದ ವಿವರವನ್ನು ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ಕೇಳುವುದು ಮಾಹಿತಿ ಹಕ್ಕಿನ ವ್ಯಾಪ್ತಿಯ ಒಳಗೆ ಬರುತ್ತದೆ. ಇದನ್ನು ಸ್ಥಾಪಿಸಿರುವುದು ಖಾಸಗಿ ವ್ಯಕ್ತಿಗಳು ಅಲ್ಲ. ಪ್ರಧಾನಿಯವರೇ ಇದರ ಅಧ್ಯಕ್ಷರು. ಇದಕ್ಕೆ ಹಣ ನೀಡಿರುವುದು ಸಾರ್ವಜನಿಕರು. ಆದ್ದರಿಂದ ಈ ಕುರಿತು ಜನರಿಗೆ ಉತ್ತರದಾಯಿ<br />ಯಾಗಿರುವುದು ಸರ್ಕಾರದ ಬಾಧ್ಯತೆ ಆಗಿರುತ್ತದೆ. ಈ ನಿಧಿಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಪ್ರಧಾನಿ ಕಚೇರಿಯು ಸ್ಪಷ್ಟ ಉತ್ತರ ನೀಡುವ ಮೂಲಕ ನಿಧಿಯ ಕುರಿತ ಗೊಂದಲಗಳಿಗೆ ಪರದೆ ಎಳೆಯಬೇಕಾಗಿದೆ.</p>.<p>ನಿರಂಜನ್ ಮೂರ್ತಿ ಆರ್.ಕೆ.,ಶಿವಮೊಗ್ಗ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>