ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ರಾಜಕೀಯ ಮೇಲಾಟ

Last Updated 20 ಜನವರಿ 2020, 19:35 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸುವವರು ದಲಿತ ವಿರೋಧಿಗಳು ಎಂಬ ಹೊಸ ಬೀಸುಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಕಾಯ್ದೆ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಹೇಳಿದ್ದಾರೆ (ಪ್ರ.ವಾ., ಜ. 19). ಇದು ನಿಜವೇ ಆಗಿದ್ದರೆ ಅವರು ಪುರಾವೆ, ಅಂಕಿ ಅಂಶದ ಸಮೇತ ವಿವರಿಸಬೇಕಿತ್ತು.

ಈ ಸಮಾವೇಶದಲ್ಲಿ ಸಚಿವರು ಅಪ್ಪಿತಪ್ಪಿಯೂ ಮಹದಾಯಿ ನದಿ ನೀರಿನ ಸಮಸ್ಯೆ ಕುರಿತಾಗಲೀ ನೆರೆ ಸಂತ್ರಸ್ತರ ಬಗ್ಗೆಯಾಗಲೀ ಚಕಾರ ಎತ್ತಲಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮಂತ್ರಿಯಾಗುವ ಕನಸು, ಮುಖ್ಯಮಂತ್ರಿಗೆ ಆದಷ್ಟು ಬೇಗ ಅವರನ್ನು ಮಂತ್ರಿ ಮಾಡಿ ಕೈತೊಳೆದುಕೊಳ್ಳುವ ಹಪಹಪಿ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತುಮಕೂರಿಗೆ ಬಂದಿದ್ದಾಗ, ಪಾಕಿಸ್ತಾನವನ್ನು ಟೀಕಿಸುವುದರಲ್ಲೇ ಕಾಲ ಕಳೆದರು. ಒಟ್ಟಿನಲ್ಲಿ ಬರೀ ರಾಜಕೀಯ ಮೇಲಾಟ.

-ಡಾ. ಶಿವರಾಜ್ ಬ್ಯಾಡರಹಳ್ಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT