ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೊದಲೇ ಕ್ರಮ ಕೈಗೊಳ್ಳಲಿಲ್ಲವೇಕೆ?

Last Updated 9 ಮೇ 2022, 21:45 IST
ಅಕ್ಷರ ಗಾತ್ರ

ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ, ಕಳೆದ ಡಿಸೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆಯ ಎಇ, ಜೆಇ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆದರೆ ಆತ ತನ್ನ ಬಂಧನವನ್ನು ಮರೆಮಾಚಲು ನೀರಾವರಿ ಇಲಾಖೆಯಿಂದ 17 ದಿನಗಳ ವೈದ್ಯಕೀಯ ರಜೆ ಮಂಜೂರು ಮಾಡಿಸಿಕೊಂಡಿದ್ದುದಾಗಿ ವರದಿಯಾಗಿದೆ (ಪ್ರ.ವಾ., ಮೇ 9).

ಈ ಕುರಿತು ಸಹಜವಾಗಿ ಉದ್ಭವಿಸುವ ಪ್ರಶ್ನೆಗಳು: ಆಪಾದಿತ ಎಂಜಿನಿಯರ್ ಅನ್ನು ಬಂಧಿಸಿದ್ದ ವಿಷಯವನ್ನು ಪೊಲೀಸ್‌ ಇಲಾಖೆಯು ನೀರಾವರಿ ಇಲಾಖೆಗೆ ತಿಳಿಸಿರಲಿಲ್ಲವೇ ಅಥವಾ ನೀರಾವರಿ ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ? ತಿಳಿಸಿದ್ದರೂ, ಗಮನಕ್ಕೆ ಬಂದಿದ್ದೂ, ಪ್ರಕರಣ ನಡೆದು ಐದು ತಿಂಗಳಾದರೂ ಆತನನ್ನು ಅಮಾನತಿನಲ್ಲಿ ಇಡದೆ, ಎರಡನೇ ಪ್ರಕರಣ ಭಾರಿ ಸದ್ದು ಮಾಡಿದ ನಂತರವಷ್ಟೇ ಅಮಾನತಿನಲ್ಲಿ ಇಟ್ಟಿದ್ದೇಕೆ? ಇದರಲ್ಲಿ ಈ ಎರಡೂ ಇಲಾಖೆಗಳ ಸಂಬಂಧಿತ ಅಧಿಕಾರಿಗಳು ಆಪಾದಿತನನ್ನು ರಕ್ಷಿಸಲು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹಾಗೆಯೇ, ಆಪಾದಿತ ಅಧಿಕಾರಿಗೆ ಪ್ರಭಾವಿಗಳ ಸಖ್ಯವಿದೆ ಎಂಬುದು ಖಚಿತವಾಗುತ್ತದೆ. ಮೊದಲ ಪ್ರಕರಣದಲ್ಲಿ ಬಂಧಿತನಾಗಿದ್ದಾಗಲೇ ಆತನನ್ನು ಅಮಾನತಿನಲ್ಲಿರಿಸಿ, ವಿಚಾರಣೆಗೆ ಒಳಪಡಿಸಿದ್ದರೆ, ಎರಡನೇ ಹಗರಣದಲ್ಲಿ ಧೈರ್ಯವಾಗಿ ಆತ ಮೂಗು ತೂರಿಸುತ್ತಿರಲಿಲ್ಲ. ಆದ್ದರಿಂದ, ವಿಳಂಬ ನೀತಿ ಅನುಸರಿಸಿ ಕರ್ತವ್ಯಲೋಪ ಎಸಗಿರುವ ಸಂಬಂಧಿಸಿದ ಇತರ ನೌಕರರನ್ನೂ ಅಮಾನತಿನಲ್ಲಿ ಇಟ್ಟು, ವಿಚಾರಣೆ ನಡೆಸಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಇಂತಹ ಹಗರಣಗಳು ಎಗ್ಗಿಲ್ಲದೆ ನಡೆಯುತ್ತಲೇ ಇರುತ್ತವೆ.

ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT