ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳು ದೈನಂದಿನ ಕೃಷಿಯಲ್ಲಿ ತೊಡಗಿ, ಕಷ್ಟಪಟ್ಟಿರುತ್ತಾರೆ. ಇಂತಹವರಿಗೆ ಉನ್ನತ ಮಟ್ಟದ ಕೃಷಿ ಶಿಕ್ಷಣ ದೊರೆತರೆ, ಅವರು ವೈಜ್ಞಾನಿಕ ಕೃಷಿಗೆ ಉತ್ತೇಜನ ನೀಡುತ್ತಾರೆ. ಇದರಿಂದ ನಿರುದ್ಯೋಗ, ನಗರೀಕರಣವನ್ನು ತಡೆಯಬಹುದು. ಆ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು. ಆದ್ದರಿಂದ ಸರ್ಕಾರ ಎಚ್ಚೆತ್ತು, ಪ್ರಸ್ತುತ ವರ್ಷದಿಂದಲೇ ನಿಜವಾದ ಕೃಷಿ ಕಾರ್ಮಿಕರು ಮತ್ತು ರೈತರ ಮಕ್ಕಳಿಗೆ ಮಾತ್ರ ಕೃಷಿ ಕೋಟಾ ಲಭ್ಯವಾಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.