ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂದಿರ ನಿರ್ಮಾಣದ ಜತೆಜತೆಗೇ ಈ ಸವಿನೆನಪಿನ ಜಂಗಮ ಸ್ವರೂಪಿಗಳಾದ ವಾಲ್ಮೀಕಿ ರಾಮಾಯಣ ಮೊದಲುಗೊಂಡು ತುಳಸಿ ರಾಮಾಯಣ, ಕಂಬ ರಾಮಾಯಣ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮುಂತಾಗಿ ದೇಶದ ನೂರಾರು ರಾಮಾಯಣ ಕಾವ್ಯಗಳನ್ನು ಸಂಪಾದಿಸಿ ಹಾಗೂ ವಿವಿಧ ದೇಶಭಾಷೆಗಳಿಗೆ ತರ್ಜುಮೆ ಮಾಡಿ ಸುಲಭ ಬೆಲೆಗೆ ಸಿಗುವಂತೆ ಪ್ರಕಟಿಸಬೇಕು.