<p>ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಪ್ರಸ್ತಾಪಿಸಿದ್ದು ಅನುಚಿತವಾಗಿದೆ. ‘ಮರಣಾಂತಾನಿ ವೈರಾಣಿ’- ಇದು ಈ ದೇಶದ ಆರ್ಷ ಧರ್ಮ ಹೇಳುವ ವಿವೇಕ. ಪ್ರಧಾನಿ ಮಾತಿನಿಂದ ಕ್ರೋಧಗೊಂಡಿರುವ ಕಾಂಗ್ರೆಸ್ ಪಕ್ಷ, ತಾನೇನೂ ಸಾಚಾ ಅಥವಾ ಸಭ್ಯ ಎಂದುಕೊಳ್ಳುವ ಅಗತ್ಯವಿಲ್ಲ. ಆ ಪಕ್ಷದ ಪ್ರಮುಖ ನಾಯಕರಿಂದ ಮೊದಲ್ಗೊಂಡು ಕೆಳಹಂತದನಾಯಕರವರೆಗೂ ಪ್ರಧಾನಿಯನ್ನು ಹೀಯಾಳಿಸುತ್ತಿರುವ ಬಗೆಯನ್ನು ನಾವು ಗಮನಿಸಬೇಕು.</p>.<p>ರಾಹುಲ್ ಗಾಂಧಿ ಅವರು ಚುನಾವಣಾ ವೇದಿಕೆಗಳಲ್ಲಿ ಪದೇ ಪದೇ ತಮ್ಮನ್ನು ನಿಂದಿಸಿದ್ದರಿಂದ ಮೋದಿ ಕ್ರುದ್ಧರಾದರೆಂದು ತೋರುತ್ತದೆ. ಆದಾಗ್ಯೂ ಅವರು ದಿವಂಗತ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡದಿದ್ದರೆ ಒಳಿತಿತ್ತು. ಈ ದೇಶದ ಪ್ರಧಾನಿ ಆಗುವ ಕನಸು ಹೊಂದಿರುವ ರಾಹುಲ್ ಕೂಡ ಆ ಹುದ್ದೆಗೆ ಅಗತ್ಯವಾದ ಗಾಂಭೀರ್ಯ, ಪ್ರೌಢಿಮೆ ತಮಗಿವೆ ಎನ್ನುವುದನ್ನು ಸಾಬೀತು ಮಾಡಿಲ್ಲ. ಒಬ್ಬ ಪ್ರಧಾನಿಯ ಬಗ್ಗೆ ಅವರು ಬಳಸುವ ಭಾಷೆ ಸಹ ಸರಿಯಿಲ್ಲ.<br /><em><strong>-ಸಾಮಗ ದತ್ತಾತ್ರಿ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಪ್ರಸ್ತಾಪಿಸಿದ್ದು ಅನುಚಿತವಾಗಿದೆ. ‘ಮರಣಾಂತಾನಿ ವೈರಾಣಿ’- ಇದು ಈ ದೇಶದ ಆರ್ಷ ಧರ್ಮ ಹೇಳುವ ವಿವೇಕ. ಪ್ರಧಾನಿ ಮಾತಿನಿಂದ ಕ್ರೋಧಗೊಂಡಿರುವ ಕಾಂಗ್ರೆಸ್ ಪಕ್ಷ, ತಾನೇನೂ ಸಾಚಾ ಅಥವಾ ಸಭ್ಯ ಎಂದುಕೊಳ್ಳುವ ಅಗತ್ಯವಿಲ್ಲ. ಆ ಪಕ್ಷದ ಪ್ರಮುಖ ನಾಯಕರಿಂದ ಮೊದಲ್ಗೊಂಡು ಕೆಳಹಂತದನಾಯಕರವರೆಗೂ ಪ್ರಧಾನಿಯನ್ನು ಹೀಯಾಳಿಸುತ್ತಿರುವ ಬಗೆಯನ್ನು ನಾವು ಗಮನಿಸಬೇಕು.</p>.<p>ರಾಹುಲ್ ಗಾಂಧಿ ಅವರು ಚುನಾವಣಾ ವೇದಿಕೆಗಳಲ್ಲಿ ಪದೇ ಪದೇ ತಮ್ಮನ್ನು ನಿಂದಿಸಿದ್ದರಿಂದ ಮೋದಿ ಕ್ರುದ್ಧರಾದರೆಂದು ತೋರುತ್ತದೆ. ಆದಾಗ್ಯೂ ಅವರು ದಿವಂಗತ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡದಿದ್ದರೆ ಒಳಿತಿತ್ತು. ಈ ದೇಶದ ಪ್ರಧಾನಿ ಆಗುವ ಕನಸು ಹೊಂದಿರುವ ರಾಹುಲ್ ಕೂಡ ಆ ಹುದ್ದೆಗೆ ಅಗತ್ಯವಾದ ಗಾಂಭೀರ್ಯ, ಪ್ರೌಢಿಮೆ ತಮಗಿವೆ ಎನ್ನುವುದನ್ನು ಸಾಬೀತು ಮಾಡಿಲ್ಲ. ಒಬ್ಬ ಪ್ರಧಾನಿಯ ಬಗ್ಗೆ ಅವರು ಬಳಸುವ ಭಾಷೆ ಸಹ ಸರಿಯಿಲ್ಲ.<br /><em><strong>-ಸಾಮಗ ದತ್ತಾತ್ರಿ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>