ರ್ಯಾಪಿಡ್ ಟೆಸ್ಟ್, ಯಾರನ್ನೆಲ್ಲ ಪರೀಕ್ಷಿಸಬೇಕು, ಎಚ್ಸಿಕ್ಯೂ ಅಂತಹ ವಿಷಯಗಳಲ್ಲಿ ಐಸಿಎಂಆರ್ ಅನಿಶ್ಚಿತತೆ, ವಿಳಂಬ ಧೋರಣೆಯಿಂದ ವರ್ತಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಯ ಬಗೆಗೆ ಪ್ರಶ್ನೆಗಳೆದ್ದಿವೆ, ಹಾಗೆಯೇ ಇಲ್ಲೂ. ವೈದ್ಯಕೀಯ ದೃಷ್ಟಿಯಿಂದ ಸರ್ಕಾರಕ್ಕೆ ಏನು ಹೇಳಬೇಕೋ ಆ ವಿಷಯದಲ್ಲಿ ಹಿಂಜರಿಕೆ, ಅಧೈರ್ಯ ಇರಬಾರದು. ವೈದ್ಯರು, ವಿಜ್ಞಾನಿಗಳು ಮೊದಲು ಸಮುದಾಯದ ಹಿತಕ್ಕೆ ನಿಷ್ಠರಾಗಿರಬೇಕು, ಸರ್ಕಾರಿ ಸಂಸ್ಥೆಗಳಲ್ಲಿ ಇರುವವರೂ ಹೀಗೆಯೇ ನಡೆದುಕೊಂಡರೆ ತೀರ್ಮಾನಗಳ ಗುಣಮಟ್ಟ ಹೆಚ್ಚುತ್ತದೆ.