ಮಳೆಗಾಲದಲ್ಲಿ ನಿರಂತರವಾಗಿ ಸುರಿಯುವ ಭಾರಿ ಮಳೆಯಂತಹ ನೈಸರ್ಗಿಕ ಸ್ಥಿತಿಗೆ ಮಾನವನಿರ್ಮಿತ ಕೃತ್ಯಗಳೂ ಸೇರಿ ಪ್ರವಾಹಕ್ಕೆ ಕಾರಣವಾಗುತ್ತವೆ. ಬೆಳೆಹಾನಿ, ಸಾವು–ನೋವಿಗೆ ದಾರಿ ತೆಗೆಯುತ್ತವೆ. ಪ್ರವಾಹ ಪರಿಸ್ಥಿತಿಗೆ ನದಿ ತೀರಗಳ ಅತಿಕ್ರಮಣ, ಯೋಜಿತವಲ್ಲದ ರೀತಿಯಲ್ಲಿ ನಗರಗಳ ಬೆಳವಣಿಗೆ, ಬೆಟ್ಟ ಕತ್ತರಿಸುವುದು ಹಾಗೂಅರಣ್ಯನಾಶದಂತಹ ಮಾನವಜನ್ಯ ಕಾರಣಗಳ ಕೊಡುಗೆ ಕಡಿಮೆಯೇನಲ್ಲ.