<p>ಗ್ರಾಮೀಣ ಬ್ಯಾಂಕುಗಳ ಕುರಿತಾದ ಜಿ.ವಿ.ಜೋಶಿ ಅವರ ಲೇಖನ (ಪ್ರ.ವಾ., ಆ. 6) ನಕಾರಾತ್ಮಕ ಧೋರಣೆಯಿಂದ ಕೂಡಿತ್ತು. ಈ ನಲವತ್ತೈದು ವರ್ಷಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಮಾಡಿದ ಸಾಧನೆ ಕಡಿಮೆಯೇನಲ್ಲ. ಇದೀಗ ಗ್ರಾಮೀಣ ಬ್ಯಾಂಕುಗಳು ದೇಶದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿ, ಕೋಟ್ಯಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಹೆಚ್ಚಿನ ವ್ಯವಹಾರ ನಡೆಸುತ್ತಿವೆ.</p>.<p>ಈ ಬ್ಯಾಂಕುಗಳ ಠೇವಣಿಗಳಲ್ಲಿ ಬಹುತೇಕ ಭಾಗ ಗ್ರಾಮೀಣ ಜನರಿಂದ ಸಂಗ್ರಹವಾಗಿದ್ದು ವಿಶೇಷವಲ್ಲವೇ? ಕೃಷಿ, ಕೃಷಿಗೆ ಅಗತ್ಯವಾದ ಯಂತ್ರೋಪಕರಣ, ಗ್ರಾಮೀಣ ಗೋದಾಮು, ಸಂಸ್ಕರಣಾ ಘಟಕ ಸೇರಿದಂತೆ ಕೃಷಿಗೆ<br />ಸಹಕಾರಿಯಾಗುವಂಥ ಮೂಲ ಸೌಕರ್ಯ ಅಭಿವೃದ್ಧಿಗೆ, ಕೃಷಿ ಆಧಾರಿತ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳಿಗೆ ಇವು ಹಣ ಕೊಟ್ಟಿವೆ. ಇದರಿಂದ ಈ ಬ್ಯಾಂಕುಗಳ ಸ್ಥಾಪನೆಯ ಮೂಲ ಉದ್ದೇಶ ಸಾರ್ಥಕವಾದಂತಲ್ಲವೇ?</p>.<p>ಗ್ರಾಮೀಣ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಈ ಬ್ಯಾಂಕುಗಳು ಮಾಡಿದ ಕಾರ್ಯಸಾಧನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಬರೀ ಲಾಭ–ನಷ್ಟದ ಲೆಕ್ಕಾಚಾರದಿಂದ ಗ್ರಾಮೀಣ ಬ್ಯಾಂಕ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯುವುದು ಸರಿಯಲ್ಲ. ಎಲ್ಲಾ ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕಾದ ಅಗತ್ಯವನ್ನು ಮನಗಾಣಬೇಕಾಗಿದೆ.</p>.<p><em><strong>-ಗಣಪತಿ ಹೆಗಡೆ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗ್ರಾಮೀಣ ಬ್ಯಾಂಕುಗಳ ಕುರಿತಾದ ಜಿ.ವಿ.ಜೋಶಿ ಅವರ ಲೇಖನ (ಪ್ರ.ವಾ., ಆ. 6) ನಕಾರಾತ್ಮಕ ಧೋರಣೆಯಿಂದ ಕೂಡಿತ್ತು. ಈ ನಲವತ್ತೈದು ವರ್ಷಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಮಾಡಿದ ಸಾಧನೆ ಕಡಿಮೆಯೇನಲ್ಲ. ಇದೀಗ ಗ್ರಾಮೀಣ ಬ್ಯಾಂಕುಗಳು ದೇಶದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿ, ಕೋಟ್ಯಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಹೆಚ್ಚಿನ ವ್ಯವಹಾರ ನಡೆಸುತ್ತಿವೆ.</p>.<p>ಈ ಬ್ಯಾಂಕುಗಳ ಠೇವಣಿಗಳಲ್ಲಿ ಬಹುತೇಕ ಭಾಗ ಗ್ರಾಮೀಣ ಜನರಿಂದ ಸಂಗ್ರಹವಾಗಿದ್ದು ವಿಶೇಷವಲ್ಲವೇ? ಕೃಷಿ, ಕೃಷಿಗೆ ಅಗತ್ಯವಾದ ಯಂತ್ರೋಪಕರಣ, ಗ್ರಾಮೀಣ ಗೋದಾಮು, ಸಂಸ್ಕರಣಾ ಘಟಕ ಸೇರಿದಂತೆ ಕೃಷಿಗೆ<br />ಸಹಕಾರಿಯಾಗುವಂಥ ಮೂಲ ಸೌಕರ್ಯ ಅಭಿವೃದ್ಧಿಗೆ, ಕೃಷಿ ಆಧಾರಿತ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳಿಗೆ ಇವು ಹಣ ಕೊಟ್ಟಿವೆ. ಇದರಿಂದ ಈ ಬ್ಯಾಂಕುಗಳ ಸ್ಥಾಪನೆಯ ಮೂಲ ಉದ್ದೇಶ ಸಾರ್ಥಕವಾದಂತಲ್ಲವೇ?</p>.<p>ಗ್ರಾಮೀಣ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಈ ಬ್ಯಾಂಕುಗಳು ಮಾಡಿದ ಕಾರ್ಯಸಾಧನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಬರೀ ಲಾಭ–ನಷ್ಟದ ಲೆಕ್ಕಾಚಾರದಿಂದ ಗ್ರಾಮೀಣ ಬ್ಯಾಂಕ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯುವುದು ಸರಿಯಲ್ಲ. ಎಲ್ಲಾ ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕಾದ ಅಗತ್ಯವನ್ನು ಮನಗಾಣಬೇಕಾಗಿದೆ.</p>.<p><em><strong>-ಗಣಪತಿ ಹೆಗಡೆ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>