ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗ್ರಾಮೀಣ ಬ್ಯಾಂಕ್: ಮಹತ್ವ ಅರಿಯಿರಿ

Last Updated 17 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಗ್ರಾಮೀಣ ಬ್ಯಾಂಕುಗಳ ಕುರಿತಾದ ಜಿ.ವಿ.ಜೋಶಿ ಅವರ ಲೇಖನ (ಪ್ರ.ವಾ., ಆ. 6) ನಕಾರಾತ್ಮಕ ಧೋರಣೆಯಿಂದ ಕೂಡಿತ್ತು. ಈ ನಲವತ್ತೈದು ವರ್ಷಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಮಾಡಿದ ಸಾಧನೆ ಕಡಿಮೆಯೇನಲ್ಲ. ಇದೀಗ ಗ್ರಾಮೀಣ ಬ್ಯಾಂಕುಗಳು ದೇಶದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿ, ಕೋಟ್ಯಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಹೆಚ್ಚಿನ ವ್ಯವಹಾರ ನಡೆಸುತ್ತಿವೆ.

ಈ ಬ್ಯಾಂಕುಗಳ ಠೇವಣಿಗಳಲ್ಲಿ ಬಹುತೇಕ ಭಾಗ ಗ್ರಾಮೀಣ ಜನರಿಂದ ಸಂಗ್ರಹವಾಗಿದ್ದು ವಿಶೇಷವಲ್ಲವೇ? ಕೃಷಿ, ಕೃಷಿಗೆ ಅಗತ್ಯವಾದ ಯಂತ್ರೋಪಕರಣ, ಗ್ರಾಮೀಣ ಗೋದಾಮು, ಸಂಸ್ಕರಣಾ ಘಟಕ ಸೇರಿದಂತೆ ಕೃಷಿಗೆ
ಸಹಕಾರಿಯಾಗುವಂಥ ಮೂಲ ಸೌಕರ್ಯ ಅಭಿವೃದ್ಧಿಗೆ, ಕೃಷಿ ಆಧಾರಿತ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳಿಗೆ ಇವು ಹಣ ಕೊಟ್ಟಿವೆ. ಇದರಿಂದ ಈ ಬ್ಯಾಂಕುಗಳ ಸ್ಥಾಪನೆಯ ಮೂಲ ಉದ್ದೇಶ ಸಾರ್ಥಕವಾದಂತಲ್ಲವೇ?

ಗ್ರಾಮೀಣ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಈ ಬ್ಯಾಂಕುಗಳು ಮಾಡಿದ ಕಾರ್ಯಸಾಧನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಬರೀ ಲಾಭ–ನಷ್ಟದ ಲೆಕ್ಕಾಚಾರದಿಂದ ಗ್ರಾಮೀಣ ಬ್ಯಾಂಕ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯುವುದು ಸರಿಯಲ್ಲ. ಎಲ್ಲಾ ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕಾದ ಅಗತ್ಯವನ್ನು ಮನಗಾಣಬೇಕಾಗಿದೆ.

-ಗಣಪತಿ ಹೆಗಡೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT