ವಿವಿಧ ರಾಜಕೀಯ ಸ್ಥಾನಮಾನಗಳಿಗೆ ಯೋಗ್ಯ ವ್ಯಕ್ತಿಗಳನ್ನು ನೇಮಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಮನ್ವಂತರವೊಂದು ನಿಜವಾಗಲೂ ಆರಂಭವಾಗಿರುವ ಹೊತ್ತಿನಲ್ಲಿಯೇ ಮತ್ತೆ ಕೆಲವು ನಾಮನಿರ್ದೇಶನಗಳು ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಿವೆ. ಶಾಂತಾರಾಮ ಸಿದ್ದಿ, ಸಾಬಣ್ಣ ತಳವಾರ, ಈರಣ್ಣ ಕಡಾಡಿ, ಅಶೋಕ ಗಸ್ತಿಯಂಥವರ ಆಯ್ಕೆಯು ಪಕ್ಷವು ನಿಜವಾಗಲೂ ರಾಜಕಾರಣವನ್ನು ಹೊಸ ದಿಗಂತದೆಡೆಗೆ ಕೊಂಡೊಯ್ಯುತ್ತಿದೆ ಎನ್ನುವಾಗಲೇ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಅಂಥವರ ನಾಮನಿರ್ದೇಶನವು ಅಂತಹ ಭರವಸೆಯನ್ನು ಹುಸಿಗೊಳಿಸುತ್ತಿದೆ.