‘ಸಂಸ್ಕೃತಿ ಕಲಿಸದ ಶಿಕ್ಷಣ’ ಎಂಬಚೆನ್ನು ಹಿರೇಮಠ ಅವರ ಲೇಖನವು (ಸಂಗತ, ಅ. 27) ಪ್ರಸಕ್ತ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಇಂದು ನಮ್ಮಲ್ಲಿ ಶಿಕ್ಷಣ ವ್ಯಾಪಕವಾಗುತ್ತಿದ್ದರೂ ಸುಸಂಸ್ಕೃತರಾಗಿ ಬದುಕಲು ಇಂದಿಗೂ ನಮಗೆ ಸಾಧ್ಯವಾಗದಿರುವುದು ದುರದೃಷ್ಟದ ಸಂಗತಿ. ಸುಶಿಕ್ಷಿತರಾದ ನಾವು ಇಂದು ಸರ್ಕಾರದ ಅಧೀನದಲ್ಲಿರುವ ಜಾಗ, ಕಟ್ಟಡಗಳು, ವಾಹನ ಮತ್ತು ಆಸ್ತಿಗಳನ್ನು ಬಳಸುವಾಗ ನಡೆದುಕೊಳ್ಳುವ ರೀತಿ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ತೋರುವ ಅಸಡ್ಡೆತನ ನೋಡಿದವರು ನಾಚಿ ತಲೆತಗ್ಗಿಸುವಂತಿರುತ್ತದೆ.