<p>ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರತಿವರ್ಷ ನಡೆದರೂ ನತದೃಷ್ಟ ಶಿಕ್ಷಕರ ವರ್ಗಾವಣೆ ನಡೆದು ಮೂರು ವರ್ಷಗಳೇ ಕಳೆದು ಹೋದವು. ಈ ವರ್ಷವಾದರೂ ವರ್ಗಾವಣೆ ಆಗಬಹುದು ಎಂದು ಬಯಸಿರುವವರಿಗೆ ಸರ್ಕಾರದಲ್ಲಿನ ಗೊಂದಲ, ರಾಜಕೀಯ ಪಕ್ಷಗಳ ವಿಕೃತ ಆಟ, ವರ್ಗಾವಣಾ ನಿಯಮದಲ್ಲಿನ ಲೋಪಗಳು ನಿರಾಶೆ ಉಂಟುಮಾಡಿವೆ.</p>.<p>ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡುವ ಪತಿ-ಪತ್ನಿಗೆ ಮತ್ತೊಂದು ಅವಕಾಶ ನೀಡುವುದು ಎಷ್ಟು ಸಮಂಜಸ? ಮೂರು ವರ್ಷಗಳ ಹಿಂದೆ ನನ್ನ ಪರಿಚಯದ ದಂಪತಿ ಅರ್ಜಿ ಹಾಕಿ ವರ್ಗಾವಣೆ ಪಡೆದರು. ಅವರಿಬ್ಬರೂ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸತಿ-ಪತಿ ಪ್ರಕರಣದಲ್ಲಿ ಅರ್ಜಿ ಹಾಕಿ ವರ್ಗಾವಣೆಗೊಂಡು ಮತ್ತೆ ಒಂದೇ ಶಾಲೆಗೆ ಹೋದರು! ಇಂಥ ಸನ್ನಿವೇಶಗಳಲ್ಲಿ ಅಲ್ಲಿರುವ ಇತರ ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆಯಾಗುತ್ತಿದೆ.</p>.<p>ಎಷ್ಟು ವರ್ಷಗಳಾದರೂ ಸ್ವಂತ ಸ್ಥಳಕ್ಕೆ ಹೋಗಲಾರದೆ, ಅಲ್ಲಿರುವ ವೃದ್ಧ ತಂದೆ ತಾಯಿಯ ಜೊತೆ ಇರಲಾಗದೆ ಮಾನಸಿಕ ನೋವು ಅನುಭವಿಸುವ ಶಿಕ್ಷಕರ ಸಂಖ್ಯೆಯೂ ಕಡಿಮೆಯಿಲ್ಲ. ಇಳಿವಯಸ್ಸಿನಲ್ಲಿ ಮಗ ಅಥವಾ ಸೊಸೆ ಜೊತೆಗಿಲ್ಲ ಎನ್ನುವ ಕೊರಗು ತಂದೆ-ತಾಯಿಗೆ ಕಾಡಿ, ತಮ್ಮ ಪುತ್ರನ ಮೇಲೆಯೇ ಅನುಮಾನ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೆ, ವರ್ಗಾವಣೆಯಲ್ಲಿ ಸತಿ–ಪತಿಯನ್ನು ಮಾತ್ರ ಪರಿಗಣಿಸಿ ತಂದೆ–ತಾಯಿಯನ್ನು ಕಡೆಗಣಿಸುವ ಸರ್ಕಾರದ ಧೋರಣೆ ಎಷ್ಟು ಸರಿ?<br /><em><strong>-ಮಂಜುನಾಥ ಸು.ಮ., ಚಿಂತಾಮಣಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರತಿವರ್ಷ ನಡೆದರೂ ನತದೃಷ್ಟ ಶಿಕ್ಷಕರ ವರ್ಗಾವಣೆ ನಡೆದು ಮೂರು ವರ್ಷಗಳೇ ಕಳೆದು ಹೋದವು. ಈ ವರ್ಷವಾದರೂ ವರ್ಗಾವಣೆ ಆಗಬಹುದು ಎಂದು ಬಯಸಿರುವವರಿಗೆ ಸರ್ಕಾರದಲ್ಲಿನ ಗೊಂದಲ, ರಾಜಕೀಯ ಪಕ್ಷಗಳ ವಿಕೃತ ಆಟ, ವರ್ಗಾವಣಾ ನಿಯಮದಲ್ಲಿನ ಲೋಪಗಳು ನಿರಾಶೆ ಉಂಟುಮಾಡಿವೆ.</p>.<p>ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡುವ ಪತಿ-ಪತ್ನಿಗೆ ಮತ್ತೊಂದು ಅವಕಾಶ ನೀಡುವುದು ಎಷ್ಟು ಸಮಂಜಸ? ಮೂರು ವರ್ಷಗಳ ಹಿಂದೆ ನನ್ನ ಪರಿಚಯದ ದಂಪತಿ ಅರ್ಜಿ ಹಾಕಿ ವರ್ಗಾವಣೆ ಪಡೆದರು. ಅವರಿಬ್ಬರೂ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸತಿ-ಪತಿ ಪ್ರಕರಣದಲ್ಲಿ ಅರ್ಜಿ ಹಾಕಿ ವರ್ಗಾವಣೆಗೊಂಡು ಮತ್ತೆ ಒಂದೇ ಶಾಲೆಗೆ ಹೋದರು! ಇಂಥ ಸನ್ನಿವೇಶಗಳಲ್ಲಿ ಅಲ್ಲಿರುವ ಇತರ ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆಯಾಗುತ್ತಿದೆ.</p>.<p>ಎಷ್ಟು ವರ್ಷಗಳಾದರೂ ಸ್ವಂತ ಸ್ಥಳಕ್ಕೆ ಹೋಗಲಾರದೆ, ಅಲ್ಲಿರುವ ವೃದ್ಧ ತಂದೆ ತಾಯಿಯ ಜೊತೆ ಇರಲಾಗದೆ ಮಾನಸಿಕ ನೋವು ಅನುಭವಿಸುವ ಶಿಕ್ಷಕರ ಸಂಖ್ಯೆಯೂ ಕಡಿಮೆಯಿಲ್ಲ. ಇಳಿವಯಸ್ಸಿನಲ್ಲಿ ಮಗ ಅಥವಾ ಸೊಸೆ ಜೊತೆಗಿಲ್ಲ ಎನ್ನುವ ಕೊರಗು ತಂದೆ-ತಾಯಿಗೆ ಕಾಡಿ, ತಮ್ಮ ಪುತ್ರನ ಮೇಲೆಯೇ ಅನುಮಾನ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೆ, ವರ್ಗಾವಣೆಯಲ್ಲಿ ಸತಿ–ಪತಿಯನ್ನು ಮಾತ್ರ ಪರಿಗಣಿಸಿ ತಂದೆ–ತಾಯಿಯನ್ನು ಕಡೆಗಣಿಸುವ ಸರ್ಕಾರದ ಧೋರಣೆ ಎಷ್ಟು ಸರಿ?<br /><em><strong>-ಮಂಜುನಾಥ ಸು.ಮ., ಚಿಂತಾಮಣಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>