ವಟ್ಟವಡ ಎಂಬ ಗ್ರಾಮದ ಕ್ಷೌರದಂಗಡಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದುದರಿಂದ, ಎಲ್ಲ ಸಮುದಾಯದವರಿಗೂ ಅನ್ವಯಿಸುವ ಸಲೂನನ್ನು ನಿರ್ಮಿಸಲು ಖುದ್ದು ಪಂಚಾಯಿತಿಯೇ ಮುಂದಾಗಿರುವುದು (ಪ್ರ.ವಾ., ಸೆ. 11) ಮಾದರಿ ನಡೆ. ದಶಕಗಳಿಂದ ನಡೆಯುತ್ತಿದ್ದ ಜಾತಿ ತಾರತಮ್ಯ ನಿರ್ಮೂಲನೆಗೆ ಇದು ಸಹಕಾರಿ.