<p>ಜಾಗತೀಕರಣದ ಪ್ರಭಾವವು ಎಲ್ಲ ಕ್ಷೇತ್ರಗಳಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಧರ್ಮವೊಂದೇ ಇವತ್ತಿನ ಮಾರುಕಟ್ಟೆ ನೀತಿಯ ಹೊರಗಿರಬೇಕೆಂದು ನಿರೀಕ್ಷಿಸುವುದು ಸಾಧ್ಯವೇ ಎಂಬ ನಡಹಳ್ಳಿ ವಸಂತ್ ಅವರ ಪ್ರಶ್ನೆ (ಸಂಗತ, ಆ. 4) ಚಿಂತನಾರ್ಹವಾಗಿದೆ. ಅನೇಕ ಧಾರ್ಮಿಕ ಮಠಗಳು ತಮ್ಮ ಐತಿಹಾಸಿಕ ಮಹತ್ವದಿಂದಲೊ, ಮಠಾಧೀಶರ ಪ್ರಭಾವದಿಂದಲೊ ಭಕ್ತರನ್ನು ಆಕರ್ಷಿಸುವ ಕೇಂದ್ರಗಳಾಗಿದ್ದವು.<br />ಜಾಗತೀಕರಣದ ಪ್ರಭಾವದಿಂದ ಬದಲಾದ ಸನ್ನಿವೇಶದಲ್ಲಿ ಮಠಗಳು, ಧಾರ್ಮಿಕ ಕೇಂದ್ರಗಳು ಭಕ್ತರನ್ನು ಆಕರ್ಷಿಸಲು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವ ಅನಿವಾರ್ಯದಲ್ಲಿವೆ. ಇದಕ್ಕೆಲ್ಲ ಬೇಕಾಗಿರುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ತಮ್ಮ ಜಾತಿಯ ಜನಪ್ರತಿನಿಧಿಗಳನ್ನು ಅವಲಂಬಿಸಿ ಅವರ ಬೆಂಬಲಕ್ಕೆ ನಿಲ್ಲುವ ಅನಿವಾರ್ಯ ಸೃಷ್ಟಿಯಾಗಿದೆ.</p>.<p>ಧರ್ಮವು ರಾಜಕಾರಣದಿಂದ ದೂರವಿರಬೇಕು, ಮಠಾಧೀಶರು ಸಮಾಜದ ಹಿತದೃಷ್ಟಿಯಿಂದ ರಾಜಕಾರಣಿ<br />ಗಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕೇ ವಿನಾ ನೇರವಾಗಿ ಅವರ ಬೆಂಬಲಕ್ಕೆ ನಿಲ್ಲುವುದು ಸಾಧುವಲ್ಲ ಮತ್ತು ಅದು ಪ್ರಜಾಪ್ರಭುತ್ವ ವಿರೋಧಿ ಎಂಬುದು ಅನೇಕ ಚಿಂತಕರ ಅಳಲು. ಮಠಗಳು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ ಉಂಟಾಗಿರುವ ತಾತ್ವಿಕ ಭಿನ್ನಾಭಿಪ್ರಾಯವನ್ನು ತಿಳಿಗೊಳಿಸಲು ಚಿಂತಕರು, ಮಠಾಧೀಶರು,<br />ಜನಪ್ರತಿನಿಧಿಗಳ ನಡುವೆ ಅರ್ಥಪೂರ್ಣವಾದ ಚರ್ಚೆ ಅವಶ್ಯವಾಗಿದೆ.</p>.<p>-ಸಂಗಯ್ಯ ಅ. ಹಿರೇಮಠ,ಧಾರವಾಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಾಗತೀಕರಣದ ಪ್ರಭಾವವು ಎಲ್ಲ ಕ್ಷೇತ್ರಗಳಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಧರ್ಮವೊಂದೇ ಇವತ್ತಿನ ಮಾರುಕಟ್ಟೆ ನೀತಿಯ ಹೊರಗಿರಬೇಕೆಂದು ನಿರೀಕ್ಷಿಸುವುದು ಸಾಧ್ಯವೇ ಎಂಬ ನಡಹಳ್ಳಿ ವಸಂತ್ ಅವರ ಪ್ರಶ್ನೆ (ಸಂಗತ, ಆ. 4) ಚಿಂತನಾರ್ಹವಾಗಿದೆ. ಅನೇಕ ಧಾರ್ಮಿಕ ಮಠಗಳು ತಮ್ಮ ಐತಿಹಾಸಿಕ ಮಹತ್ವದಿಂದಲೊ, ಮಠಾಧೀಶರ ಪ್ರಭಾವದಿಂದಲೊ ಭಕ್ತರನ್ನು ಆಕರ್ಷಿಸುವ ಕೇಂದ್ರಗಳಾಗಿದ್ದವು.<br />ಜಾಗತೀಕರಣದ ಪ್ರಭಾವದಿಂದ ಬದಲಾದ ಸನ್ನಿವೇಶದಲ್ಲಿ ಮಠಗಳು, ಧಾರ್ಮಿಕ ಕೇಂದ್ರಗಳು ಭಕ್ತರನ್ನು ಆಕರ್ಷಿಸಲು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವ ಅನಿವಾರ್ಯದಲ್ಲಿವೆ. ಇದಕ್ಕೆಲ್ಲ ಬೇಕಾಗಿರುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ತಮ್ಮ ಜಾತಿಯ ಜನಪ್ರತಿನಿಧಿಗಳನ್ನು ಅವಲಂಬಿಸಿ ಅವರ ಬೆಂಬಲಕ್ಕೆ ನಿಲ್ಲುವ ಅನಿವಾರ್ಯ ಸೃಷ್ಟಿಯಾಗಿದೆ.</p>.<p>ಧರ್ಮವು ರಾಜಕಾರಣದಿಂದ ದೂರವಿರಬೇಕು, ಮಠಾಧೀಶರು ಸಮಾಜದ ಹಿತದೃಷ್ಟಿಯಿಂದ ರಾಜಕಾರಣಿ<br />ಗಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕೇ ವಿನಾ ನೇರವಾಗಿ ಅವರ ಬೆಂಬಲಕ್ಕೆ ನಿಲ್ಲುವುದು ಸಾಧುವಲ್ಲ ಮತ್ತು ಅದು ಪ್ರಜಾಪ್ರಭುತ್ವ ವಿರೋಧಿ ಎಂಬುದು ಅನೇಕ ಚಿಂತಕರ ಅಳಲು. ಮಠಗಳು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ ಉಂಟಾಗಿರುವ ತಾತ್ವಿಕ ಭಿನ್ನಾಭಿಪ್ರಾಯವನ್ನು ತಿಳಿಗೊಳಿಸಲು ಚಿಂತಕರು, ಮಠಾಧೀಶರು,<br />ಜನಪ್ರತಿನಿಧಿಗಳ ನಡುವೆ ಅರ್ಥಪೂರ್ಣವಾದ ಚರ್ಚೆ ಅವಶ್ಯವಾಗಿದೆ.</p>.<p>-ಸಂಗಯ್ಯ ಅ. ಹಿರೇಮಠ,ಧಾರವಾಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>