‘ಯಾರು ಇತರರಿಗಾಗಿ ಬದುಕುತ್ತಾರೋ ಅವರು ಬದುಕುತ್ತಾರೆ, ತನಗಾಗಿ ಮಾತ್ರ ಬದುಕುವವರು ಇದ್ದರೂ ಸತ್ತಂತೆ’ ಎಂಬ ಸ್ವಾಮಿ ವಿವೇಕಾನಂದರ ಮಾತಿಗೆ ಇವರು ಅನ್ವರ್ಥದಂತಿದ್ದಾರೆ. ತಮ್ಮ ಆದಾಯ ಕಡಿಮೆಯಿದ್ದು ಸ್ವತಃ ಸಂಕಷ್ಟದಲ್ಲಿದ್ದರೂ ಅದೇ ಆದಾಯದಲ್ಲಿ ಸಮಾಜಕ್ಕೆ ಕೊಡುಗೆ ಕೊಡಲು ಮುಂದಾಗಿದ್ದಾರೆ. ಆಯಾ ಜಿಲ್ಲೆಯ ಶಾಸಕರು, ಸಂಸದರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡರೆ ನಮ್ಮ ಎಷ್ಟೋ ಕನ್ನಡ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಇಂತಹ ಪುಣ್ಯದ ಕಾರ್ಯಕ್ಕೆ ಶ್ರೀಮಂತರು ಸಹ ಮುಂದೆ ಬಂದು ಉದಾತ್ತ ಕೊಡುಗೆ ನೀಡಬೇಕು.