ಕ್ರಿಯಾಶೀಲರೂ ಬಸವ ಸಿದ್ಧಾಂತದ ಪ್ರಬುದ್ಧ ಹಾಗೂ ಸಮರ್ಪಿತ ಅನುಭವಿ ಚೇತನರೂ ಆದ ಬೆಳಗಾವಿ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿಯನ್ನು ಗದಗಿನ ತೋಂಟದಾರ್ಯ ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿರುವುದು ಸೂಕ್ತ ಹಾಗೂ ಸಕಾಲಿಕ ನಿರ್ಣಯ! ಗದಗಿನ ಲಿಂಗೈಕ್ಯ ಶ್ರೀಗಳೊಂದಿಗೆ ಶೈಕ್ಷಣಿಕ- ಧಾರ್ಮಿಕ- ಸಾಮಾಜಿಕ ಕಾರ್ಯಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದ ಬೆಳಗಾವಿಯ ಸಿದ್ಧರಾಮ ಸ್ವಾಮೀಜಿ ಗಡಿನಾಡ ಕನ್ನಡಕ್ಕೆ ಘನತೆ ತಂದುಕೊಟ್ಟವರು.