‘ಪ್ರಧಾನಿಗೆ ಪತ್ರ ಬರೆಯುವುದು ದೇಶದ್ರೋಹದ ಕೃತ್ಯವೇ?’ ಎಂದು ಪ್ರಶ್ನಿಸಿರುವ ಸಂಪಾದಕೀಯ (ಪ್ರ.ವಾ., ಅ. 10) ಅತ್ಯುತ್ತಮ ವಿಮರ್ಶೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ಆಳುವ ವರ್ಗವನ್ನು ಟೀಕಿಸುವ ಹಾಗೂ ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾನೆ. ಗುಂಪು ಹಲ್ಲೆಯ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದದ್ದು ಗಣ್ಯರ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ.