ತೆರಿಗೆ ಪಾವತಿಗೆ ಹಿಂದೇಟು ಹಾಕಿದ ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು (ಪ್ರ.ವಾ., ಜುಲೈ 14) ಸರಿಯಾಗಿದೆ. ಜನಸಾಮಾನ್ಯರು ತಾವು ಕಷ್ಟಪಟ್ಟು ದುಡಿದ ಹಣವನ್ನು ಚಲನಚಿತ್ರ ನೋಡಲು ಸುರಿಯುತ್ತಾರೆ. ಇದರಿಂದ ದೊರೆತ ಪ್ರತಿಫಲವೇ ವಿಜಯ್ ಅವರಂತಹ ನಟರಿಗೆ ಹಣದ ಸುರಿಮಳೆಯಾಗುವುದು.