ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಐತಿಹಾಸಿಕ ಜಲಾಶಯಕ್ಕೆ ಆಗಬಹುದಾದ ಅಪಾಯ ತಡೆಯುವುದಕ್ಕಿಂತ ಗಣಿ ಧಣಿಗಳ ಲಾಭಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವ ಹುನ್ನಾರ ಎದ್ದು ಕಾಣುತ್ತದೆ. ಜಲಾಶಯಕ್ಕೆ ಗಣಿಗಾರಿಕೆಯಿಂದ ಹಾನಿ ಆಗುತ್ತದೋ ಇಲ್ಲವೋ ಎಂಬುದನ್ನು ಸ್ಫೋಟ ಮಾಡಿ ನೋಡುವುದೆಂದರೆ, ತಲೆಬುರುಡೆ ಗಟ್ಟಿ ಇದೆಯೋ ಇಲ್ಲವೋ ಎಂದು ಸುತ್ತಿಗೆಯಿಂದ ತಲೆಗೆ ಬಡಿದು ನೋಡಿದಂತೆ. ಪರೀಕ್ಷಾರ್ಥ ಸ್ಫೋಟ ನಡೆಸಿದ್ದೇ ಆದರೆ ಆ ಪರೀಕ್ಷೆಯಿಂದ ಮತ್ತು ನಂತರದ ಸ್ಫೋಟಗಳ ಅನುಮತಿಯಿಂದ ಆಗಬಲ್ಲ ಹಾನಿಗೆ ಯಾರು ಜವಾಬ್ದಾರರು? ಕೆಆರ್ಎಸ್ನಂತಹ ಜಲಾಶಯ ನಿರ್ಮಾಣ ಮಾಡಲಿಕ್ಕಂತೂ ಇವರಿಂದ ಅಸಾಧ್ಯ. ಕನಿಷ್ಠ ಇರುವಂತಹ ಇಂತಹ ಅಮೂಲ್ಯ ನಿರ್ಮಾಣಗಳನ್ನು ಸಾಮೂಹಿಕ ದುರಾಸೆಗೆ ಬಲಿ ಕೊಡದಿರಲಿ.