ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾನ್‌ ನಾಯಕ’ನ ಬಗ್ಗೆ ಅರಿಯಬೇಕಿದೆ

Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

ಡಾ. ಬಿ.ಆರ್‌.ಅಂಬೇಡ್ಕರ್ ಅವರನ್ನು ಹೆಚ್ಚೆಂದರೆ ಸಂವಿಧಾನ ಶಿಲ್ಪಿ ಅಥವಾ ಅದಕ್ಕೂ ಹೆಚ್ಚೆಂದರೆ ಅವರೊಬ್ಬ ದಲಿತ ನಾಯಕ ಎಂದಷ್ಟೇ ಬಿಂಬಿಸುವ ಮೂಲಕ, ಅವರ ಸಾಧನೆಗಳ ಸರಮಾಲೆಯನ್ನು ಮೊಟಕುಗೊಳಿಸುವ ಪ್ರಯತ್ನ ದಶಕಗಳ ಹಿಂದೆಯೇ ಆರಂಭವಾಗಿದೆ. ಹೀಗಿರುವಾಗ, ಝೀ ಕನ್ನಡ ವಾಹಿನಿಯು ‘ಮಹಾನ್‌ ನಾಯಕ’ ಸಂಚಿಕೆಯ ಮೂಲಕ ಅಂಬೇಡ್ಕರ್ ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡಲು ಮುಂದಾಗಿರುವುದು ಶ್ಲಾಘನೀಯ. ಅವರು ಸೀಮಿತ ವರ್ಗದ ನಾಯಕರಲ್ಲ, ವಿಶ್ವದ ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ, ಶ್ರೇಷ್ಠ ವ್ಯಕ್ತಿತ್ವವುಳ್ಳ ಮಹಾನಾಯಕ ಎಂಬ ಸತ್ಯವನ್ನು ಈ ಧಾರಾವಾಹಿ ವೀಕ್ಷಣೆಯ ಮೂಲಕವಾದರೂ ನಾವು ತಿಳಿದುಕೊಳ್ಳಬೇಕಿದೆ.

- ವಿಜಯಕುಮಾರ್ ಎಸ್. ಸುಜ್ಜಲೂರು,ಟಿ.ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT