ನಿಜ, ಖ್ಯಾತ ಚಿತ್ರವೊಂದರ ಭಾಗವಾಗುವುದು ಎಲ್ಲರಿಗೂ ಅಭಿಮಾನದ ವಿಷಯ. ಆದರೆ ಆ ಒಂದು ಪಾತ್ರಕ್ಕಾಗಿ ಇಷ್ಟು ವರ್ಷ ತಮ್ಮ ಜೀವನಕ್ಕೆ ಆಧಾರವಾಗಿದ್ದ, ತಮ್ಮನ್ನು, ತಮ್ಮ ಕುಟುಂಬನ್ನು ಸಲಹಿದ, ಪ್ರಾಯಶಃ ಈ ಚಲನಚಿತ್ರದ ಪಾತ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದ ರಂಗಭೂಮಿಯನ್ನು ತಿರಸ್ಕಾರದಿಂದ ಕಂಡಾಗ ಯಾಕೋ ಬೇಸರವಾಯಿತು. ಕೆಜಿಎಫ್ ಚಿತ್ರದ ತಂದೆಯ ಪಾತ್ರವೇನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ‘ನಾಗರಹಾವು’ ಚಲನಚಿತ್ರದ ಚಾಮಯ್ಯ ಮೇಷ್ಟ್ರು ಅಥವಾ ಒನಕೆ ಓಬವ್ವನ ಪಾತ್ರದಂತಹ ಸಕಾರಾತ್ಮಕ ಪಾತ್ರವಾಗಿರದೆ, ಕುಡುಕ ಗಂಡನ ಪಾತ್ರವಾಗಿದೆ. ಕೇವಲ ಅಂತಹದ್ದೊಂದು ಪಾತ್ರ ಮತ್ತು ಆ ಚಲನಚಿತ್ರದೊಂದಿಗೆ ಗುರುತಿಸಿಕೊಂಡು ಖ್ಯಾತರಾಗಲು ಅವರಾಡಿದ ಮಾತು ಡಿವಿಜಿ ಅವರ ‘ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣು-ಗಂಡೊಲವು, ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ...’ ಎಂಬ ಕಗ್ಗದ ಸಾಲುಗಳನ್ನು ನೆನಪಿಸಿತು. ಎಷ್ಟೊಂದು ನಿಜ