ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ: ಭ್ರಷ್ಟರ ಪಾಲಾಗದಿರಲಿ

Last Updated 2 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಈ ವರ್ಷ ವಿಪರೀತ ಬರಗಾಲ ಆವರಿಸಿದ್ದು, ಹಳ್ಳಿಗರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯು ಹೆಸರಿಗೆ ಮಾತ್ರ ಸೀಮಿತವಾಗಿದೆ.

ಕಾಮಗಾರಿಗಳು ಅನುಷ್ಠಾನಕ್ಕೆ ಬಂದರೂ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಪಾಲಾಗುತ್ತಿವೆ. ಜೆಸಿಬಿ, ಟ್ರ್ಯಾಕ್ಟರ್‌ಗಳ ಮೂಲಕ ಕೆಲಸ ಪೂರ್ಣಗೊಳಿಸಿ, ಹೆಸರಿಗೆ ನಾಲ್ಕಾರು ಜನರನ್ನು ಕರೆತಂದು ಅಧಿಕಾರಿಗಳಿಗೆ ತೋರಿಸಿ ಬಿಲ್ ಮಾಡಿಸಿಕೊಳ್ಳುತ್ತಾರೆ.

ಬಿಲ್ ಆದ ನಂತರ, ಜಾಬ್ ಕಾರ್ಡ್ ಹೊಂದಿರುವವರ ಮುಖಾಂತರ ಹಣ ಬಿಡುಗಡೆಗೊಳಿಸಿ, ಅವರಿಗೆ ₹100, ₹200 ಕೊಟ್ಟು ಉಳಿದ ಹಣವನ್ನೆಲ್ಲ ಭ್ರಷ್ಟಾಚಾರಿಗಳು ಲಪಟಾಯಿಸುತ್ತಿದ್ದಾರೆ. ಈ ಬರಗಾಲದಲ್ಲಾದರೂ ಬಡವರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT