ಸ್ವಾತಂತ್ರ್ಯ ಲಭಿಸಿ 75 ವರ್ಷ ಗತಿಸಿದರೂ ಜಾತೀಯತೆ ಅಳಿದಿಲ್ಲವೆಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ (ಪ್ರ.ವಾ., ನ. 29). ಜಾತೀಯತೆ ಅಳಿದಿಲ್ಲವಷ್ಟೇ ಅಲ್ಲ ಜಾತೀಯತೆಯಿಂದ ಉಂಟಾಗುತ್ತಿರುವ ಶ್ರೇಷ್ಠತೆಯ ಅಹಂಕಾರವು ದಮನಿತ ಜನಾಂಗಕ್ಕೆ ಮಾಡುತ್ತಿರುವ ಅವಮಾನ ನಿಜಕ್ಕೂ ಅಸಹನೀಯವಾಗಿದೆ. ಅಷ್ಟೇ ಅಲ್ಲದೆ ರಾಜಕಾರಣಿಗಳು ಕೂಡ ಜಾತಿಯ ದಳ್ಳುರಿಗೆ ತುಪ್ಪ ಸುರಿಯುತ್ತಿರುವುದು ಒಂದು ದುರಂತವೇ ಆಗಿದೆ.