ಡಾ. ಗೀತಾ ವಸಂತ ಅವರು ಬರೆದಿರುವ ಲೇಖನ (ಪ್ರ.ವಾ., ಮೇ 17) ಸಮಾಜದಲ್ಲಿ ಹೆಣ್ಣಿನ ಸ್ಥಾನದ ಮಹತ್ವದ ಕುರಿತು ಅರಿವು ಮೂಡಿಸುವಂತಿದೆ. ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲವಳಾದ ಮಹಿಳೆ, ಸಮಾಜದಲ್ಲಿ ಅಸ್ಮಿತೆಗಾಗಿ, ತನ್ನ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾಳೆ. ದೇಶ ಸ್ವಾತಂತ್ರ್ಯ ಪಡೆದು, ಸಂವಿಧಾನ ಜಾರಿಯಾಗಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದರೂ ಅದರ ಅನುಷ್ಠಾನ ಮಾತ್ರ ಆಮೆಗತಿಯಲ್ಲಿದೆ. ಮಹಿಳಾ ಸಬಲೀಕರಣ ಬರೀ ಘೋಷಣೆಯ ಗೊಡ್ಡು ಮಂತ್ರವಾಗಿದೆ.