<p>ಕರಾವಳಿಯ ಮೀನುಗಾರರ ಪಾಲಿಗೆ ಮಂಗಳೂರು ಅಳಿವೆ ಬಾಗಿಲು ಮತ್ತೊಮ್ಮೆ ದುರಂತದ ಬಾಯಿ ತೆರೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಪ್ರತೀ ವರ್ಷವೂ ಜೀವ ಕಳೆದುಕೊಳ್ಳುವ ಅಮಾಯಕ ಮೀನುಗಾರರ ಪಟ್ಟಿಗೆ ಮತ್ತೆ ಹೊಸಬರೂ ಸೇರ್ಪಡೆಯಾಗಿ ಕಡಲ ಭೋರ್ಗರೆತದೊಂದಿಗೆ ಅವರೂ ಬೆರೆತು- ಮರೆತು ಹೋಗುವ ಮುನ್ನ ಒಂದಿಷ್ಟು ಮಾನವೀಯ ಕಳಕಳಿಯಿಂದ ಯೋಚಿಸಬೇಕಿದೆ.<br /> <br /> ಈ ಬಾರಿಯ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ವ್ಯಕ್ತಿಯೂಬ್ಬ ಸೇರಿದಂತೆ ಕಣ್ಮರೆಯಾಗಿ ಕಡಲು ಸೇರಿದ ಇತರ ಆರು ಮಂದಿ ಮೀನುಗಾರರೂ ಕಡಲ ಭೀಷಣ ನರ್ತನದೊಂದಿಗೇ, ದಡದಲ್ಲಿದ್ದ ಮನುಷ್ಯರ ಭೀಕರ ಕ್ರೌರ್ಯವನ್ನು ಅಕ್ಷರಶಃ ಕಂಡುಂಡು ನೀರುಪಾಲಾದರೆಂಬುದೇ ವಿಷಾದಕರ.<br /> <br /> ಕೇಂದ್ರ ಸರ್ಕಾರದ ಸುಪರ್ದಿಗೆ ಬರುವ ಬಂದರು ಆಡಳಿತದ ಈ ರೀತಿಯ ಅಮಾನವೀಯ ವರ್ತನೆ ಇದೇ ಮೊದಲ ಸಲವಲ್ಲವಾದರೂ, ಸ್ಥಳೀಯ ಸರ್ಕಾರವಾಗಲಿ, ಸಂಬಂಧಿಸಿದ ಇಲಾಖೆಯಾಗಲಿ ಈ ಬಗ್ಗೆ ಯಾವ ಸುಧಾರಿತ ಕ್ರಮಗಳನ್ನೂ ತೆಗೆದುಕೊಂಡಂತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಅನಾಹುತಗಳು ಮತ್ತೆ ಮರುಕಳಿಸದಂತೆ ಸಂಬಂಧಿಸಿದವರು ಕ್ರಮಕೈಗೊಳ್ಳುವರೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರಾವಳಿಯ ಮೀನುಗಾರರ ಪಾಲಿಗೆ ಮಂಗಳೂರು ಅಳಿವೆ ಬಾಗಿಲು ಮತ್ತೊಮ್ಮೆ ದುರಂತದ ಬಾಯಿ ತೆರೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಪ್ರತೀ ವರ್ಷವೂ ಜೀವ ಕಳೆದುಕೊಳ್ಳುವ ಅಮಾಯಕ ಮೀನುಗಾರರ ಪಟ್ಟಿಗೆ ಮತ್ತೆ ಹೊಸಬರೂ ಸೇರ್ಪಡೆಯಾಗಿ ಕಡಲ ಭೋರ್ಗರೆತದೊಂದಿಗೆ ಅವರೂ ಬೆರೆತು- ಮರೆತು ಹೋಗುವ ಮುನ್ನ ಒಂದಿಷ್ಟು ಮಾನವೀಯ ಕಳಕಳಿಯಿಂದ ಯೋಚಿಸಬೇಕಿದೆ.<br /> <br /> ಈ ಬಾರಿಯ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ವ್ಯಕ್ತಿಯೂಬ್ಬ ಸೇರಿದಂತೆ ಕಣ್ಮರೆಯಾಗಿ ಕಡಲು ಸೇರಿದ ಇತರ ಆರು ಮಂದಿ ಮೀನುಗಾರರೂ ಕಡಲ ಭೀಷಣ ನರ್ತನದೊಂದಿಗೇ, ದಡದಲ್ಲಿದ್ದ ಮನುಷ್ಯರ ಭೀಕರ ಕ್ರೌರ್ಯವನ್ನು ಅಕ್ಷರಶಃ ಕಂಡುಂಡು ನೀರುಪಾಲಾದರೆಂಬುದೇ ವಿಷಾದಕರ.<br /> <br /> ಕೇಂದ್ರ ಸರ್ಕಾರದ ಸುಪರ್ದಿಗೆ ಬರುವ ಬಂದರು ಆಡಳಿತದ ಈ ರೀತಿಯ ಅಮಾನವೀಯ ವರ್ತನೆ ಇದೇ ಮೊದಲ ಸಲವಲ್ಲವಾದರೂ, ಸ್ಥಳೀಯ ಸರ್ಕಾರವಾಗಲಿ, ಸಂಬಂಧಿಸಿದ ಇಲಾಖೆಯಾಗಲಿ ಈ ಬಗ್ಗೆ ಯಾವ ಸುಧಾರಿತ ಕ್ರಮಗಳನ್ನೂ ತೆಗೆದುಕೊಂಡಂತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಅನಾಹುತಗಳು ಮತ್ತೆ ಮರುಕಳಿಸದಂತೆ ಸಂಬಂಧಿಸಿದವರು ಕ್ರಮಕೈಗೊಳ್ಳುವರೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>