ಹಾಸನದ ಬೇಲೂರು ಹತ್ತಿರ ಬಸ್ಸಿನ ಅಪಘಾತ, ಕರ್ನಾಟಕ ಸಾರಿಗೆ ನಿಗಮಕ್ಕೆ ಎಚ್ಚರಿಕೆಯ ಗಂಟೆ. ನಮ್ಮ ರಾಜ್ಯದ ಹಳ್ಳಿ, ಪಟ್ಟಣಗಳ ಕಡೆ ಓಡಾಡುವ ಸರ್ಕಾರಿ ಬಸ್ಸುಗಳ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಬಸ್ಸುಗಳ ಸಂಚಾರ ಯೋಗ್ಯತೆಯನ್ನು ಆಗಿಂದಾಗ್ಗೆ ಪರಿಶೀಲಿಸಿ, ನಿರ್ವಹಣೆ ಕಡೆ ಗಮನಹರಿಸಿದರೆ ಕೆಲವಾದರೂ ಅಪಘಾತಗಳನ್ನು ತಪ್ಪಿಸಬಹುದು.