ಸಂಸ್ಕೃತ ಕಲಿಕೆ ಕುರಿತು ಜಿ. ಚೆನ್ನವೀರಸ್ವಾಮಿ ಅವರ ಪತ್ರ `ಸಂಕುಚಿತ ಮತಿ~ಗಳ ಕಣ್ಣು ತೆರೆಸುತ್ತದೆ (ಪ್ರ ವಾ ವಾ ಮೇ.17). ಅನ್ಯರು ಮುಖಕ್ಕೆ ಮಂಗಳಾರತಿ ಎತ್ತಿದಾಗಲೇ ವಿಪ್ರ ಸಮಾಜಕ್ಕೆ ಜ್ಞಾನೋದಯವಾಗುತ್ತದೆ.
ಉಡುಪಿಯ ಮಾಧ್ವರು, ಗೋಕರ್ಣದ ಹವ್ಯಕರಿಗೆ ತಾವಷ್ಟೆ ಬ್ರಹ್ಮಬೀಜ ಸಮುತ್ಪನ್ನರೆಂಬ ಭ್ರಮೆ ಇರಬಹುದು. ಅವರ ಕಣ್ಣಿಗೆ ಶ್ರಿವೈಷ್ಣವರು ದಲಿತರಂತೆ ಕಂಡರೂ ಅಚ್ಚರಿಯಿಲ್ಲ.
ಆದರೆ ಈ ಶ್ರಿ ವೈಷ್ಣವ ದಲಿತರು ಮೇಲುಕೋಟೆಯಲ್ಲಿ ಮಾಡುತ್ತಿರುವುದೇನು? ಗುಂಪುಗಾರಿಕೆ, ಅಂತಃಕಲಹ, ಇವರಲ್ಲಿ ಇರುವ `ಯು~ ಮತ್ತು `ವೈ~ (ವಡಗಲೈ ತೆಂಗಲೈ) ಬಣಗಳಲ್ಲಿ ಯಾರು `ಬಲಗೈ~ ಯಾರು `ಎಡಗೈ~ ಎಂಬುದು ಇನ್ನೂ ತೀರ್ಮಾನವಾಗಿಲ್ಲ.
ದೇವರ ಮೂಲ ವಿಗ್ರಹದಲ್ಲಿ `ಯು~ ಗುರುತಿನ ನಾಮವ್ದ್ದಿದ ಕಡೆ ಮಧ್ಯದಲ್ಲಿ ಗೂಟ ಹೊಡೆಯುವ ಸಂಭ್ರಮ ಒಂದು ವರ್ಗಕ್ಕೆ. `ವೈ~ ಇದ್ದಲ್ಲಿ ಗೂಟ ಕೀಳುವ ಸಂಭ್ರಮ ಮತ್ತೊಂದು ಬಣಕ್ಕೆ. ಒಬ್ಬರ ಆಚಾರ್ಯರ ಸನ್ನಿಧಿಯಲ್ಲಿ ಮತ್ತೊಬ್ಬರು ಮಂಗಳಾಶಾಸನ ಮಾಡುವುದೆಂದರೆ ಸೂತಕದ ಮನೆಯಲ್ಲಿ ಚರಮಶ್ಲೋಕ ಪಠಿಸಿದಷ್ಟೆ ಅಮಂಗಳ.