<p>ಸಂಸ್ಕೃತ ಕಲಿಕೆ ಕುರಿತು ಜಿ. ಚೆನ್ನವೀರಸ್ವಾಮಿ ಅವರ ಪತ್ರ `ಸಂಕುಚಿತ ಮತಿ~ಗಳ ಕಣ್ಣು ತೆರೆಸುತ್ತದೆ (ಪ್ರ ವಾ ವಾ ಮೇ.17). ಅನ್ಯರು ಮುಖಕ್ಕೆ ಮಂಗಳಾರತಿ ಎತ್ತಿದಾಗಲೇ ವಿಪ್ರ ಸಮಾಜಕ್ಕೆ ಜ್ಞಾನೋದಯವಾಗುತ್ತದೆ. <br /> <br /> ಉಡುಪಿಯ ಮಾಧ್ವರು, ಗೋಕರ್ಣದ ಹವ್ಯಕರಿಗೆ ತಾವಷ್ಟೆ ಬ್ರಹ್ಮಬೀಜ ಸಮುತ್ಪನ್ನರೆಂಬ ಭ್ರಮೆ ಇರಬಹುದು. ಅವರ ಕಣ್ಣಿಗೆ ಶ್ರಿವೈಷ್ಣವರು ದಲಿತರಂತೆ ಕಂಡರೂ ಅಚ್ಚರಿಯಿಲ್ಲ. <br /> <br /> ಆದರೆ ಈ ಶ್ರಿ ವೈಷ್ಣವ ದಲಿತರು ಮೇಲುಕೋಟೆಯಲ್ಲಿ ಮಾಡುತ್ತಿರುವುದೇನು? ಗುಂಪುಗಾರಿಕೆ, ಅಂತಃಕಲಹ, ಇವರಲ್ಲಿ ಇರುವ `ಯು~ ಮತ್ತು `ವೈ~ (ವಡಗಲೈ ತೆಂಗಲೈ) ಬಣಗಳಲ್ಲಿ ಯಾರು `ಬಲಗೈ~ ಯಾರು `ಎಡಗೈ~ ಎಂಬುದು ಇನ್ನೂ ತೀರ್ಮಾನವಾಗಿಲ್ಲ.<br /> <br /> ದೇವರ ಮೂಲ ವಿಗ್ರಹದಲ್ಲಿ `ಯು~ ಗುರುತಿನ ನಾಮವ್ದ್ದಿದ ಕಡೆ ಮಧ್ಯದಲ್ಲಿ ಗೂಟ ಹೊಡೆಯುವ ಸಂಭ್ರಮ ಒಂದು ವರ್ಗಕ್ಕೆ. `ವೈ~ ಇದ್ದಲ್ಲಿ ಗೂಟ ಕೀಳುವ ಸಂಭ್ರಮ ಮತ್ತೊಂದು ಬಣಕ್ಕೆ. ಒಬ್ಬರ ಆಚಾರ್ಯರ ಸನ್ನಿಧಿಯಲ್ಲಿ ಮತ್ತೊಬ್ಬರು ಮಂಗಳಾಶಾಸನ ಮಾಡುವುದೆಂದರೆ ಸೂತಕದ ಮನೆಯಲ್ಲಿ ಚರಮಶ್ಲೋಕ ಪಠಿಸಿದಷ್ಟೆ ಅಮಂಗಳ.</p>.<p>ಇನ್ನಿವರು ಸಂಸ್ಕೃತ ಕಲಿತು ಕೆತ್ತುವುದೇನು? `ಕಂಬಮೆ ತಣ್ಣಿ, ರಂಗನೇ ದೈವಮ್ ಪೊಂಗಲ್ ಪ್ರಸಾದಂ~ ಎಂದು ಜೊಲ್ಲು ಸುರಿಸುವವರಿಗೆ ಸಂಸ್ಕೃತದ ಮೇಲಣ ಮೋಹ ಅಷ್ಟಕ್ಕಷ್ಟೆ. ತ್ರಿಮತಸ್ಥರಲ್ಲಿ, ಇದ್ದುದರಲ್ಲಿ ಹೊಯ್ಸಳ ಕರ್ನಾಟಕ ಪಂಗಡದವರು ಉದಾರ ನಿಲುವು ತಳೆದವರು. <br /> <br /> ಅವರು ಮನಸ್ಸು ಮಾಡಿದರೆ ಶ್ರಿ ವೈಷ್ಣವರೂ ಸೇರಿದಂತೆ ದಲಿತರು, ಅಲ್ಪಸಂಖ್ಯಾತರನ್ನು ತಮ್ಮ ತೆಕ್ಕೆಯೊಳಗೆ ತಂದುಕೊಂಡು ಸಂಸ್ಕೃತ ಕಲಿಸಬಹುದು. ಅನುದಾನದ ವಿಷಯದಲ್ಲಿ ಚೆನ್ನವೀರ ಸ್ವಾಮಿ ಅವರ ಧೋರಣೆ ಚಿಂತನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಸ್ಕೃತ ಕಲಿಕೆ ಕುರಿತು ಜಿ. ಚೆನ್ನವೀರಸ್ವಾಮಿ ಅವರ ಪತ್ರ `ಸಂಕುಚಿತ ಮತಿ~ಗಳ ಕಣ್ಣು ತೆರೆಸುತ್ತದೆ (ಪ್ರ ವಾ ವಾ ಮೇ.17). ಅನ್ಯರು ಮುಖಕ್ಕೆ ಮಂಗಳಾರತಿ ಎತ್ತಿದಾಗಲೇ ವಿಪ್ರ ಸಮಾಜಕ್ಕೆ ಜ್ಞಾನೋದಯವಾಗುತ್ತದೆ. <br /> <br /> ಉಡುಪಿಯ ಮಾಧ್ವರು, ಗೋಕರ್ಣದ ಹವ್ಯಕರಿಗೆ ತಾವಷ್ಟೆ ಬ್ರಹ್ಮಬೀಜ ಸಮುತ್ಪನ್ನರೆಂಬ ಭ್ರಮೆ ಇರಬಹುದು. ಅವರ ಕಣ್ಣಿಗೆ ಶ್ರಿವೈಷ್ಣವರು ದಲಿತರಂತೆ ಕಂಡರೂ ಅಚ್ಚರಿಯಿಲ್ಲ. <br /> <br /> ಆದರೆ ಈ ಶ್ರಿ ವೈಷ್ಣವ ದಲಿತರು ಮೇಲುಕೋಟೆಯಲ್ಲಿ ಮಾಡುತ್ತಿರುವುದೇನು? ಗುಂಪುಗಾರಿಕೆ, ಅಂತಃಕಲಹ, ಇವರಲ್ಲಿ ಇರುವ `ಯು~ ಮತ್ತು `ವೈ~ (ವಡಗಲೈ ತೆಂಗಲೈ) ಬಣಗಳಲ್ಲಿ ಯಾರು `ಬಲಗೈ~ ಯಾರು `ಎಡಗೈ~ ಎಂಬುದು ಇನ್ನೂ ತೀರ್ಮಾನವಾಗಿಲ್ಲ.<br /> <br /> ದೇವರ ಮೂಲ ವಿಗ್ರಹದಲ್ಲಿ `ಯು~ ಗುರುತಿನ ನಾಮವ್ದ್ದಿದ ಕಡೆ ಮಧ್ಯದಲ್ಲಿ ಗೂಟ ಹೊಡೆಯುವ ಸಂಭ್ರಮ ಒಂದು ವರ್ಗಕ್ಕೆ. `ವೈ~ ಇದ್ದಲ್ಲಿ ಗೂಟ ಕೀಳುವ ಸಂಭ್ರಮ ಮತ್ತೊಂದು ಬಣಕ್ಕೆ. ಒಬ್ಬರ ಆಚಾರ್ಯರ ಸನ್ನಿಧಿಯಲ್ಲಿ ಮತ್ತೊಬ್ಬರು ಮಂಗಳಾಶಾಸನ ಮಾಡುವುದೆಂದರೆ ಸೂತಕದ ಮನೆಯಲ್ಲಿ ಚರಮಶ್ಲೋಕ ಪಠಿಸಿದಷ್ಟೆ ಅಮಂಗಳ.</p>.<p>ಇನ್ನಿವರು ಸಂಸ್ಕೃತ ಕಲಿತು ಕೆತ್ತುವುದೇನು? `ಕಂಬಮೆ ತಣ್ಣಿ, ರಂಗನೇ ದೈವಮ್ ಪೊಂಗಲ್ ಪ್ರಸಾದಂ~ ಎಂದು ಜೊಲ್ಲು ಸುರಿಸುವವರಿಗೆ ಸಂಸ್ಕೃತದ ಮೇಲಣ ಮೋಹ ಅಷ್ಟಕ್ಕಷ್ಟೆ. ತ್ರಿಮತಸ್ಥರಲ್ಲಿ, ಇದ್ದುದರಲ್ಲಿ ಹೊಯ್ಸಳ ಕರ್ನಾಟಕ ಪಂಗಡದವರು ಉದಾರ ನಿಲುವು ತಳೆದವರು. <br /> <br /> ಅವರು ಮನಸ್ಸು ಮಾಡಿದರೆ ಶ್ರಿ ವೈಷ್ಣವರೂ ಸೇರಿದಂತೆ ದಲಿತರು, ಅಲ್ಪಸಂಖ್ಯಾತರನ್ನು ತಮ್ಮ ತೆಕ್ಕೆಯೊಳಗೆ ತಂದುಕೊಂಡು ಸಂಸ್ಕೃತ ಕಲಿಸಬಹುದು. ಅನುದಾನದ ವಿಷಯದಲ್ಲಿ ಚೆನ್ನವೀರ ಸ್ವಾಮಿ ಅವರ ಧೋರಣೆ ಚಿಂತನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>