ದಾವಣಗೆರೆ ನಗರದ ಸಮೀಪದ "ದೊಡ್ಡ ಬಾತಿ ಕೆರೆ"ಯನ್ನು ಹಾದು ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬಸ್ ಗಳು ಈ ಕೆರೆಯನ್ನು ಸಮೀಪಿಸಿದೊಡನೆ ಪ್ರಯಾಣಿಕರ ಎದೆ ಝಲ್ ಎನ್ನುತ್ತದೆ. ಚಾಲಕ ನಿರ್ಲಕ್ಷ್ಯ ತೋರಿದರೆ ಮುಗಿಯಿತು.
ಪ್ರಯಾಣಿಕರೆಲ್ಲ ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ. ಇನ್ನಾದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಈ ಕೆರೆಗೆ ತಡೆಗೋಡೆ ನಿರ್ಮಿಸಬೇಕೆಂದು ಕೋರುವೆ.