<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಲೋಕದಲ್ಲಿ ‘ಭಾವ’ ಎಂದೇಕವಿ ಮನೆ ಮಾತಾಗಿದ್ದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸೇರಿದಂತೆ ಸಂಸ್ಕೃತ, ಇಂಗ್ಲಿಷ್ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ.</p>.<p>ಸರಳ ಸಜ್ಜನಿಕೆಗೆ ಹೆಸರಾಗಿದ್ದ ಲಕ್ಷ್ಮೀನಾರಾಯಣ ಭಟ್ಟರನ್ನು ಅವರ ಶಿಷ್ಯರು, ಆಪ್ತರು ಪ್ರೀತಿಯಿಂದ ಎನ್ಎಸ್ಎಲ್ ಎಂದು ಕರೆಯುತ್ತಿದ್ದರು. ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡು ಮಾದರಿಯಾಗಿ ಬದುಕಿದವರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/karnataka-news/famous-poet-ns-lakshminarayana-bhatta-no-more-810961.html" itemprop="url" target="_blank">ಜನಪ್ರಿಯ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ</a></p>.<p>ಲಕ್ಷ್ಮೀನಾರಾಯಣ ಭಟ್ಟರು 1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ ಜನಿಸಿದರು. ಇಂಟರ್ಮೀಡಿಯೆಟ್ ಬಳಿಕ ಮೈಸೂರಿನಲ್ಲಿ ಎಂ.ಎ ಆನರ್ಸ್ ಪದವಿ ಪಡೆದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಪದವಿಯನ್ನು ಪಡೆದರು. ‘ಆಧುನಿಕ ಕನ್ನಡ ಕಾವ್ಯ’ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ ದೊರೆಯಿತು. ತೀನಂಶ್ರೀ, ಡಿಎಲ್ ಗುಂಡಪ್ಪ, ಶ್ರೀಕಂಠ ಶಾಸ್ತ್ರಿ ಅವರ ಒಡನಾಟದೊಂದಿಗೆ ಆಳವಾಗಿ ಸಾಹಿತ್ಯ ಅಧ್ಯಯನ ಮಾಡಿದರು. ಇಂಗ್ಲಿಷ್ ಮತ್ತು ಸಂಸ್ಖೃತ ಕಲಿತು ಅನುವಾದ ಕೆಲಸಗಳಲ್ಲೂ ತೊಡಗಿಕೊಂಡರು.</p>.<p>ಶಿಶುಸಾಹಿತ್ಯ, ಭಾವಗೀತೆಗಳ ರಚನೆ ಮತ್ತು ಅನುವಾದ ಕಾರ್ಯ ಅವರಿಗೆ ಬಹು ಪ್ರಿಯವಾದ ಪ್ರಕಾರಗಳಾಗಿದ್ದವು. ಮಕ್ಕಳಿಗಾಗಿ ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. </p>.<p><strong>ಇದನ್ನೂ ಓದಿ:</strong><a href="https://www.prajavani.net/district/bengaluru-city/kannada-poet-ns-lakshminarayana-bhatta-lyrics-53849.html" target="_blank">ಪ್ರೀತಿಯ ಒರತೆ ಭಾವಗೀತೆ: ಲಕ್ಷ್ಮೀನಾರಾಯಣ ಭಟ್ಟ</a></p>.<p>ಸುನೀತ, ಚಿನ್ನದ ಹಕ್ಕಿ, ಯೇಟ್ಸ್ , ಶೇಕ್ಸ್ ಪಿಯರ್, ಎಲಿಯಟ್, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ ಎಂಬ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ ಜನಪ್ರಿಯ ಕವನ ಸಂಕಲನಗಳಾಗಿವೆ.</p>.<p>ಬಾಲಸಾಹಿತ್ಯ ಪುರಸ್ಕಾರ, ಶಿವರಾಮಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.</p>.<p><strong>ಇನ್ನಷ್ಟು ಸುದ್ದಿಗಳು<br />*</strong><a href="https://cms.prajavani.net/artculture/poetry/kannada-poet-ns-lakshminarayana-bhatta-work-on-shakespeare-sonnets-337915.html" itemprop="url" target="_blank">ಕೆ.ವಿ.ತಿರುಮಲೇಶ್ ಬರಹ: ಎನ್.ಎಸ್.ಎಲ್. ಮತ್ತು ಶೇಕ್ಸ್ಪಿಯರನ ಸುನೀತಮಾಲೆ</a><br />*<a href="https://cms.prajavani.net/artculture/music/ns-lakshminarayana-bhatta-famous-songs-in-kannada-810972.html" itemprop="url" target="_blank">ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು...</a><br />*<a href="https://cms.prajavani.net/video/karnataka-news/information-about-kannada-famous-poet-ns-lakshminarayana-bhatta-810971.html" itemprop="url" target="_blank">ನೋಡಿ: ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಾಕ್ಷ್ಯಚಿತ್ರ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಲೋಕದಲ್ಲಿ ‘ಭಾವ’ ಎಂದೇಕವಿ ಮನೆ ಮಾತಾಗಿದ್ದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸೇರಿದಂತೆ ಸಂಸ್ಕೃತ, ಇಂಗ್ಲಿಷ್ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ.</p>.<p>ಸರಳ ಸಜ್ಜನಿಕೆಗೆ ಹೆಸರಾಗಿದ್ದ ಲಕ್ಷ್ಮೀನಾರಾಯಣ ಭಟ್ಟರನ್ನು ಅವರ ಶಿಷ್ಯರು, ಆಪ್ತರು ಪ್ರೀತಿಯಿಂದ ಎನ್ಎಸ್ಎಲ್ ಎಂದು ಕರೆಯುತ್ತಿದ್ದರು. ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡು ಮಾದರಿಯಾಗಿ ಬದುಕಿದವರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/karnataka-news/famous-poet-ns-lakshminarayana-bhatta-no-more-810961.html" itemprop="url" target="_blank">ಜನಪ್ರಿಯ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ</a></p>.<p>ಲಕ್ಷ್ಮೀನಾರಾಯಣ ಭಟ್ಟರು 1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ ಜನಿಸಿದರು. ಇಂಟರ್ಮೀಡಿಯೆಟ್ ಬಳಿಕ ಮೈಸೂರಿನಲ್ಲಿ ಎಂ.ಎ ಆನರ್ಸ್ ಪದವಿ ಪಡೆದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಪದವಿಯನ್ನು ಪಡೆದರು. ‘ಆಧುನಿಕ ಕನ್ನಡ ಕಾವ್ಯ’ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ ದೊರೆಯಿತು. ತೀನಂಶ್ರೀ, ಡಿಎಲ್ ಗುಂಡಪ್ಪ, ಶ್ರೀಕಂಠ ಶಾಸ್ತ್ರಿ ಅವರ ಒಡನಾಟದೊಂದಿಗೆ ಆಳವಾಗಿ ಸಾಹಿತ್ಯ ಅಧ್ಯಯನ ಮಾಡಿದರು. ಇಂಗ್ಲಿಷ್ ಮತ್ತು ಸಂಸ್ಖೃತ ಕಲಿತು ಅನುವಾದ ಕೆಲಸಗಳಲ್ಲೂ ತೊಡಗಿಕೊಂಡರು.</p>.<p>ಶಿಶುಸಾಹಿತ್ಯ, ಭಾವಗೀತೆಗಳ ರಚನೆ ಮತ್ತು ಅನುವಾದ ಕಾರ್ಯ ಅವರಿಗೆ ಬಹು ಪ್ರಿಯವಾದ ಪ್ರಕಾರಗಳಾಗಿದ್ದವು. ಮಕ್ಕಳಿಗಾಗಿ ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. </p>.<p><strong>ಇದನ್ನೂ ಓದಿ:</strong><a href="https://www.prajavani.net/district/bengaluru-city/kannada-poet-ns-lakshminarayana-bhatta-lyrics-53849.html" target="_blank">ಪ್ರೀತಿಯ ಒರತೆ ಭಾವಗೀತೆ: ಲಕ್ಷ್ಮೀನಾರಾಯಣ ಭಟ್ಟ</a></p>.<p>ಸುನೀತ, ಚಿನ್ನದ ಹಕ್ಕಿ, ಯೇಟ್ಸ್ , ಶೇಕ್ಸ್ ಪಿಯರ್, ಎಲಿಯಟ್, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ ಎಂಬ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ ಜನಪ್ರಿಯ ಕವನ ಸಂಕಲನಗಳಾಗಿವೆ.</p>.<p>ಬಾಲಸಾಹಿತ್ಯ ಪುರಸ್ಕಾರ, ಶಿವರಾಮಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.</p>.<p><strong>ಇನ್ನಷ್ಟು ಸುದ್ದಿಗಳು<br />*</strong><a href="https://cms.prajavani.net/artculture/poetry/kannada-poet-ns-lakshminarayana-bhatta-work-on-shakespeare-sonnets-337915.html" itemprop="url" target="_blank">ಕೆ.ವಿ.ತಿರುಮಲೇಶ್ ಬರಹ: ಎನ್.ಎಸ್.ಎಲ್. ಮತ್ತು ಶೇಕ್ಸ್ಪಿಯರನ ಸುನೀತಮಾಲೆ</a><br />*<a href="https://cms.prajavani.net/artculture/music/ns-lakshminarayana-bhatta-famous-songs-in-kannada-810972.html" itemprop="url" target="_blank">ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು...</a><br />*<a href="https://cms.prajavani.net/video/karnataka-news/information-about-kannada-famous-poet-ns-lakshminarayana-bhatta-810971.html" itemprop="url" target="_blank">ನೋಡಿ: ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಾಕ್ಷ್ಯಚಿತ್ರ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>