ಇಂದು (ಫೆ.15) ದೇಶದ 73ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪರೇಡ್ನಲ್ಲಿಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್,ಮನೋಜ್ ಮುಕುಂದ್ ನರವಾಣೆ ಭಾಗವಹಿಸಿದ್ದರು. ಸೈನಿಕರು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ವೀರಮರಣವನ್ನಪ್ಪಿದ ಸೈನಿಕರಿಗೆ ಇಂದು ಪದಕ ನೀಡಲಾಗುತ್ತಿದ್ದು, ಅದನ್ನು ಸ್ವೀಕರಿಸಲು ಅವರ ಕುಟುಂಬಸ್ಥರು ಸೇನಾ ದಿನದ ಕಾರ್ಯಕ್ರಮಕ್ಕೆ ಅಗಮಿಸಿದ್ದರು.