<p><strong>ಬಳ್ಳಾರಿ:</strong>‘ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್ರಾಜಕೀಯ ಸಿದ್ಧಾಂತ ಮತ್ತು ದೇಶದ ಜನರನ್ನು ವಿಭಜಿಸುವ ಬಿಜೆಪಿ ಸಿದ್ಧಾಂತದ ನಡುವಿನ ಹೋರಾಟದಲ್ಲಿ ಮತದಾರರು ಪ್ರಜಾಸತ್ತಾತ್ಮಕವಾದ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರನ್ನು ಬೆಂಬಲಿಸಬೇಕು’ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.</p>.<p>ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿ ಆಡಳಿತ ಮೋದಿಯವರದ್ದು. ತಮ್ಮ ಸರ್ಕಾರದ ಸಚಿವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಮೋದಿ ಅವಕಾಶ ನೀಡಲೇ ಇಲ್ಲ. ಅಂಥ ಮೋದಿಯನ್ನು ನೋಡಿ ಮತ ಹಾಕಿ ಎಂದು ಅಭ್ಯರ್ಥಿ ಗಳು ಕೇಳುತ್ತಿರುವುದು ವಿಪರ್ಯಾಸಎಂದು ನಗರದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ವಿಷಾದಿಸಿದರು.</p>.<p><strong>ಇದನ್ನೂ ಓದಿ...<a href="https://www.prajavani.net/prajamatha/v-s-ugrappa-dint-vote-loksabha-630098.html" target="_blank">ಮತ ಚಲಾಯಿಸದ ಉಗ್ರಪ್ಪ:ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ</a></strong></p>.<p>ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ಯಾವ ಭರವಸೆ ಗಳನ್ನೂ ಈಡೇರಿಸಲಿಲ್ಲ. ಭಯೋತ್ಪಾದಕ ರ ಮೇಲಿನ ದಾಳಿಯನ್ನು, ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಅವರು ಚುನಾವಣೆ ಪ್ರಚಾರಕ್ಕೆ ಬಳಸುತ್ತಿರುವುದು ಖಂಡನೀಯಎಂದರು.</p>.<p>ಚುನಾವಣೆ ಯು ರಾಷ್ಟ್ರಭಕ್ತರು ಮತ್ತು ಭಕ್ತರಲ್ಲದವರ ನಡುವಿನ ಹೋರಾಟ ಎಂದು ಬಿಜೆಪಿ ಬಿಂಬಿಸುತ್ತಿದೆ. ಆದರೆ ಚುನಾವಣೆಯು ನಕಲಿ ದೇಶಭಕ್ತರು ಮತ್ತು ನಿಜವಾದ ದೇಶ ಭಕ್ತರ ನಡುವಿನ ಹೋರಾಟಎಂದು ಪ್ರತಿಪಾದಿಸಿದರು.</p>.<p>ಸ್ವಚ್ಛ ಭಾರತ್ ಕಾರ್ಯಕ್ರಮದ ಜಾಹೀರಾತಿಗೆ ಕೋಟಿಗಟ್ಟಳೆ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ದೇಶದ ಶೇ ೫೦ ಪೌರಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲಎಂದು ಆರೋಪಿಸಿದರು.</p>.<p>ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ, ಕಪ್ಪು ಹಣವನ್ನು ತರದೇ ಇರುವ ಬಗ್ಗೆ ಮಾತನಾಡದ ಮೋದಿ ಮತ್ತೆ ಐದು ವರ್ಷಗಳ ಕಾಲ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಆತಂಕಕಾರಿ ಸಂಗತಿಎಂದರು.<br /><br /><strong>‘ಕುಮಾರಸ್ವಾಮಿ ಹೇಳಿಕೆ ಸರಿ’</strong><br />‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿಯೇ ಮಗ ಹೇಳಿದ್ದಾರೆ. ಸೈನ್ಯಕ್ಕೆ ಸೇರಲು ಇರುವ ಹಲವು ಕಾರಣಗಳಲ್ಲಿ ಬಡತನವೂ ಒಂದು ಪ್ರಮುಖ ಕಾರಣ’ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong>‘ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್ರಾಜಕೀಯ ಸಿದ್ಧಾಂತ ಮತ್ತು ದೇಶದ ಜನರನ್ನು ವಿಭಜಿಸುವ ಬಿಜೆಪಿ ಸಿದ್ಧಾಂತದ ನಡುವಿನ ಹೋರಾಟದಲ್ಲಿ ಮತದಾರರು ಪ್ರಜಾಸತ್ತಾತ್ಮಕವಾದ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರನ್ನು ಬೆಂಬಲಿಸಬೇಕು’ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.</p>.<p>ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿ ಆಡಳಿತ ಮೋದಿಯವರದ್ದು. ತಮ್ಮ ಸರ್ಕಾರದ ಸಚಿವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಮೋದಿ ಅವಕಾಶ ನೀಡಲೇ ಇಲ್ಲ. ಅಂಥ ಮೋದಿಯನ್ನು ನೋಡಿ ಮತ ಹಾಕಿ ಎಂದು ಅಭ್ಯರ್ಥಿ ಗಳು ಕೇಳುತ್ತಿರುವುದು ವಿಪರ್ಯಾಸಎಂದು ನಗರದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ವಿಷಾದಿಸಿದರು.</p>.<p><strong>ಇದನ್ನೂ ಓದಿ...<a href="https://www.prajavani.net/prajamatha/v-s-ugrappa-dint-vote-loksabha-630098.html" target="_blank">ಮತ ಚಲಾಯಿಸದ ಉಗ್ರಪ್ಪ:ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ</a></strong></p>.<p>ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ಯಾವ ಭರವಸೆ ಗಳನ್ನೂ ಈಡೇರಿಸಲಿಲ್ಲ. ಭಯೋತ್ಪಾದಕ ರ ಮೇಲಿನ ದಾಳಿಯನ್ನು, ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಅವರು ಚುನಾವಣೆ ಪ್ರಚಾರಕ್ಕೆ ಬಳಸುತ್ತಿರುವುದು ಖಂಡನೀಯಎಂದರು.</p>.<p>ಚುನಾವಣೆ ಯು ರಾಷ್ಟ್ರಭಕ್ತರು ಮತ್ತು ಭಕ್ತರಲ್ಲದವರ ನಡುವಿನ ಹೋರಾಟ ಎಂದು ಬಿಜೆಪಿ ಬಿಂಬಿಸುತ್ತಿದೆ. ಆದರೆ ಚುನಾವಣೆಯು ನಕಲಿ ದೇಶಭಕ್ತರು ಮತ್ತು ನಿಜವಾದ ದೇಶ ಭಕ್ತರ ನಡುವಿನ ಹೋರಾಟಎಂದು ಪ್ರತಿಪಾದಿಸಿದರು.</p>.<p>ಸ್ವಚ್ಛ ಭಾರತ್ ಕಾರ್ಯಕ್ರಮದ ಜಾಹೀರಾತಿಗೆ ಕೋಟಿಗಟ್ಟಳೆ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ದೇಶದ ಶೇ ೫೦ ಪೌರಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲಎಂದು ಆರೋಪಿಸಿದರು.</p>.<p>ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ, ಕಪ್ಪು ಹಣವನ್ನು ತರದೇ ಇರುವ ಬಗ್ಗೆ ಮಾತನಾಡದ ಮೋದಿ ಮತ್ತೆ ಐದು ವರ್ಷಗಳ ಕಾಲ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಆತಂಕಕಾರಿ ಸಂಗತಿಎಂದರು.<br /><br /><strong>‘ಕುಮಾರಸ್ವಾಮಿ ಹೇಳಿಕೆ ಸರಿ’</strong><br />‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿಯೇ ಮಗ ಹೇಳಿದ್ದಾರೆ. ಸೈನ್ಯಕ್ಕೆ ಸೇರಲು ಇರುವ ಹಲವು ಕಾರಣಗಳಲ್ಲಿ ಬಡತನವೂ ಒಂದು ಪ್ರಮುಖ ಕಾರಣ’ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>