<p><strong>ಹದಿನೈದು ವರ್ಷಗಳಿಂದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ನಿರಂತರ ಫೌಂಡೇಶನ್~ ತನ್ನದೇ ಆತ ಛಾಪು ಮೂಡಿಸುತ್ತಿದೆ. ಉತ್ಸಾಹಿ ಯುವ ಪ್ರತಿಭಾವಂತರನ್ನು ಒಳಗೊಂಡ `ನಿರಂತರ~ ತಂಡ ಪರಿಣಾಮಕಾರಿಯಾಗಿ ಜನಪರ ಹೋರಾಟದ ರಂಗಭೂಮಿಯಾಗಿ ರೂಪುಗೊಂಡಿದೆ...<br /> <br /> </strong>ಯುವ ಶಕ್ತಿ ಮನಸ್ಸು ಮಾಡಿದರೆ ಯಾವುದೇ ರಂಗದಲ್ಲಾದರೂ ಪರಿವರ್ತನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಮೈಸೂರಿನ ನಿರಂತರ ಫೌಂಡೇಶನ್ ತಂಡ ಶ್ರಮಿಸುತ್ತಿದೆ. <br /> <br /> ಸಾಂಸ್ಕೃತಿಕ ನೆಲಗಟ್ಟಿನಲ್ಲಿ ತನ್ನ ಪ್ರತಿಭೆಯನ್ನು ನಾಟಕ ಹಾಗೂ ಸಾಂಸ್ಕೃತಿ ಚಟುವಟಿಕೆಗಳ ಮೂಲಕ ಬಿತ್ತುತ್ತಿರುವ ನಿರಂತರ ತಂಡವು, ಮೈಸೂರು ಮಾತ್ರವಲ್ಲದೇ ನಾಡಿನಾದ್ಯಂತ ತನ್ನ ಹಿರಿಮೆಯನ್ನು ವೃದ್ಧಿಕೊಳ್ಳುತ್ತಾ ಸಾಗಿದೆ. <br /> <br /> ಆರಂಭದಲ್ಲಿ `ಮಾನಸ ಗಂಗೋತ್ರಿ~ಯಲ್ಲಿ ಹತ್ತಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಕೆಲ ಹಿರಿಯರ ಆಸ್ಥೆಯಲ್ಲಿ ಕೇವಲ ಬೌದ್ಧಿಕ ಪಟ್ಟಾಂಗಕ್ಕೆ ವೇದಿಕೆಯಾಗಿದ್ದ `ನಿರಂತರ~ ಇಂದು ಒಂದು ಸಾಂಸ್ಕೃತಿಕ ಕೂಸಾಗಿ ಬೆಳೆದಿರುವುದಕ್ಕೆ ಅದಕ್ಕಿರುವ ವೈಚಾರಿಕ ಮತ್ತು ಪ್ರಗತಿಪರ ಧೋರಣೆಗಳೇ ಬೆನ್ನೆಲುಬು. <br /> <br /> ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾಜದ ಉನ್ನತಿಗಾಗಿ, ಶಿಕ್ಷಣದ ಪ್ರಗತಿಗಾಗಿ ಪರ್ಯಾಯಗಳನ್ನು ಹುಡುಕುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ಮೈಸೂರಿನ ನಿರಂತರ ಫೌಂಡೇಶನ್~ಗೆ ಈಗ ಹತ್ತಿರತ್ತಿರ ಹದಿನೈದರ ತಾರುಣ್ಯ. <br /> <br /> ನಿರಂತರ ಫೌಂಡೇಶನ್ ಮುಖ್ಯವಾಗಿ ಸಾಮಾಜಿಕ ಅರಿವು ಹಾಗೂ ಬದ್ಧತೆಯುಳ್ಳ ಉತ್ಸಾಹಿ ಪ್ರತಿಭಾವಂತರನ್ನು ಒಳಗೊಂಡ ಜನಪರ ಹೋರಾಟಗಳ ರಂಗಭೂಮಿಯಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. <br /> <br /> ಅನೇಕ ಸೃಜನಶೀಲ, ಜನಪಯೋಗಿ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡುತ್ತಾ ತನ್ನದೇ ಛಾಪು ಮೂಡಿಸಿದೆ. `ನಮ್ಮ ಜೀವನ ಇಡೀ ವಿಶ್ವಕ್ಕೆ ಸಂದೇಶವಿದ್ದಂತೆ. ಹೀಗಾಗಿ ಅದನ್ನು ಸ್ಫೂರ್ತಿದಾಯಕವಾಗಿಸಿಕೊಳ್ಳಬೇಕು~ ಎನ್ನುತ್ತಾರೆ ನಿರಂತರ ತಂಡದ ಕಲಾವಿದರು.<br /> <br /> `ನಿರಂತರ~ ಅನೇಕ ಜನಪರ ಹೋರಾಟಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಚಾಮಲಾಪುರ ಉಷ್ಣವಿದ್ಯುತ್ ಸ್ಥಾವರ ವಿರೋಧಿ ಚಳವಳಿಯಲ್ಲಿ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. <br /> <br /> ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥಾ ನಡೆಸಿದೆ. ಕರ್ನಾಟಕದಾದ್ಯಂತ ಬಸವಣ್ಣನ ವಚನಗಳನ್ನಾಧರಿಸಿದ ಮಹತ್ವಾಕಾಂಕ್ಷೆ `ಕೂಡಲಸಂಗಮ~ ದೃಶ್ಯರೂಪಕದ 75 ಪ್ರದರ್ಶನಗಳನ್ನು ನೀಡಿದೆ. <br /> <br /> ರೈತರ ಸಮಸ್ಯೆ ಕುರಿತಾದ ಬಾದಲ್ ಸರ್ಕಾರ್ ಅವರ `ಭೋಮ~ ನಾಟಕವನ್ನೂ ಯಶಸ್ವಿಯಾಗಿ ಪ್ರದರ್ಶಿಸಿರುವ ಹೆಗ್ಗಳಿಕೆಯೂ ಇದಕ್ಕಿದೆ. <br /> <br /> ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ ಹಾಗೂ ಬಾದಲ್ ಸರ್ಕಾರ್ ಅವರ ಪಿ.ಗಂಗಾಧರಸ್ವಾಮಿ ನಿರ್ದೇಶನದ `ಮೆರವಣಿಗೆ~ ನಾಟಕ ಪ್ರದರ್ಶನವೂ ನಿರಂತರದ ವೈಶಿಷ್ಟ್ಯಪೂರ್ಣ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. <br /> <br /> ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ `ಸಹಜರಂಗ~ ಎಂಬ ರಂಗತರಬೇತಿ ಶಿಬಿರವನ್ನೂ ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯನ್ನುಪರದೆಯಾಗಿಟ್ಟುಕೊಂಡು ನಮ್ಮತನದ, ನೆಲ, ಜಲ, ಜನಪದ, ಸಂಸ್ಕೃತಿಯನ್ನು ಹೊಸ ತಲೆಮಾರಿನೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನವೇ ಈ ಸಹಜರಂಗದ ಮುಖ್ಯ ಧ್ಯೇಯವಾಗಿದೆ. <br /> ಚೆನ್ನಕೇಶವ ನಿರ್ದೇಶನದ ಕಾವ್ಯಗಳನ್ನಾಧರಿಸಿದ `ಇದೆ...ಇತ್ತು...ಇರುತ್ತದೆ~ಯನ್ನು ಪ್ರದರ್ಶಿಸಿದೆ. <br /> <br /> ಖ್ಯಾತ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ಚೀನಿ ನಾಟಕಕಾರ ಲಾವೋಶೆಯವರ `ಟೀ ಹೌಸ್~ ನಾಟಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದೆ. <br /> <br /> ಅಂತರರಾಜ್ಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ನಿಟ್ಟಿನಲ್ಲಿ ಮಣಿಪುರದ ಕನ್ಹಯ್ಯಾಲಾಲ್ ಅವರ ಕಲಾಕ್ಷೇತ್ರ ತಂಡದ `ಬಿಜಲಿ ಪಪ್ಪೆಟ್~ ಹಾಗೂ ಛತ್ತೀಸ್ಗಡದ ಬಸ್ತಾರ್ ಬ್ಯಾಂಡ್ ಪ್ರದರ್ಶನವನ್ನೂ ಆಯೋಜಿಸಿ ಸೈ ಎನ್ನಿಸಿಕೊಂಡಿದೆ. <br /> <br /> ಭಿನ್ನವಿಭಿನ್ನ ನಾಟಕ ಹಾಗೂ ಪ್ರಯೋಗ ಶೈಲಿಯನ್ನು ಒಂದೆಡೆ ಪ್ರಯೋಗಿಸುವ ನಿರಂತರ ರಂಗ ಉತ್ಸವವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವುದು ಇದರ ಮತ್ತೊಂದು ವಿಶೇಷ. <br /> <br /> ಪರಿಸರ ಪಕ್ಷಿಗಳ ಅರಿವು ಮೂಡಿಸುವ ಮಕ್ಕಳ ಗೀತೆಗಳ `ಹಾರೋಣ ಬಾ~ ಪುಸ್ತಕ ಹೊರತರುವ ಮೂಲಕ ಶಿಶು ಸಾಹಿತ್ಯಕ್ಕೂ ತನ್ನ ಕೊಡುಗೆ ನೀಡಿದೆ.<strong> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹದಿನೈದು ವರ್ಷಗಳಿಂದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ನಿರಂತರ ಫೌಂಡೇಶನ್~ ತನ್ನದೇ ಆತ ಛಾಪು ಮೂಡಿಸುತ್ತಿದೆ. ಉತ್ಸಾಹಿ ಯುವ ಪ್ರತಿಭಾವಂತರನ್ನು ಒಳಗೊಂಡ `ನಿರಂತರ~ ತಂಡ ಪರಿಣಾಮಕಾರಿಯಾಗಿ ಜನಪರ ಹೋರಾಟದ ರಂಗಭೂಮಿಯಾಗಿ ರೂಪುಗೊಂಡಿದೆ...<br /> <br /> </strong>ಯುವ ಶಕ್ತಿ ಮನಸ್ಸು ಮಾಡಿದರೆ ಯಾವುದೇ ರಂಗದಲ್ಲಾದರೂ ಪರಿವರ್ತನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಮೈಸೂರಿನ ನಿರಂತರ ಫೌಂಡೇಶನ್ ತಂಡ ಶ್ರಮಿಸುತ್ತಿದೆ. <br /> <br /> ಸಾಂಸ್ಕೃತಿಕ ನೆಲಗಟ್ಟಿನಲ್ಲಿ ತನ್ನ ಪ್ರತಿಭೆಯನ್ನು ನಾಟಕ ಹಾಗೂ ಸಾಂಸ್ಕೃತಿ ಚಟುವಟಿಕೆಗಳ ಮೂಲಕ ಬಿತ್ತುತ್ತಿರುವ ನಿರಂತರ ತಂಡವು, ಮೈಸೂರು ಮಾತ್ರವಲ್ಲದೇ ನಾಡಿನಾದ್ಯಂತ ತನ್ನ ಹಿರಿಮೆಯನ್ನು ವೃದ್ಧಿಕೊಳ್ಳುತ್ತಾ ಸಾಗಿದೆ. <br /> <br /> ಆರಂಭದಲ್ಲಿ `ಮಾನಸ ಗಂಗೋತ್ರಿ~ಯಲ್ಲಿ ಹತ್ತಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಕೆಲ ಹಿರಿಯರ ಆಸ್ಥೆಯಲ್ಲಿ ಕೇವಲ ಬೌದ್ಧಿಕ ಪಟ್ಟಾಂಗಕ್ಕೆ ವೇದಿಕೆಯಾಗಿದ್ದ `ನಿರಂತರ~ ಇಂದು ಒಂದು ಸಾಂಸ್ಕೃತಿಕ ಕೂಸಾಗಿ ಬೆಳೆದಿರುವುದಕ್ಕೆ ಅದಕ್ಕಿರುವ ವೈಚಾರಿಕ ಮತ್ತು ಪ್ರಗತಿಪರ ಧೋರಣೆಗಳೇ ಬೆನ್ನೆಲುಬು. <br /> <br /> ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾಜದ ಉನ್ನತಿಗಾಗಿ, ಶಿಕ್ಷಣದ ಪ್ರಗತಿಗಾಗಿ ಪರ್ಯಾಯಗಳನ್ನು ಹುಡುಕುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ಮೈಸೂರಿನ ನಿರಂತರ ಫೌಂಡೇಶನ್~ಗೆ ಈಗ ಹತ್ತಿರತ್ತಿರ ಹದಿನೈದರ ತಾರುಣ್ಯ. <br /> <br /> ನಿರಂತರ ಫೌಂಡೇಶನ್ ಮುಖ್ಯವಾಗಿ ಸಾಮಾಜಿಕ ಅರಿವು ಹಾಗೂ ಬದ್ಧತೆಯುಳ್ಳ ಉತ್ಸಾಹಿ ಪ್ರತಿಭಾವಂತರನ್ನು ಒಳಗೊಂಡ ಜನಪರ ಹೋರಾಟಗಳ ರಂಗಭೂಮಿಯಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. <br /> <br /> ಅನೇಕ ಸೃಜನಶೀಲ, ಜನಪಯೋಗಿ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡುತ್ತಾ ತನ್ನದೇ ಛಾಪು ಮೂಡಿಸಿದೆ. `ನಮ್ಮ ಜೀವನ ಇಡೀ ವಿಶ್ವಕ್ಕೆ ಸಂದೇಶವಿದ್ದಂತೆ. ಹೀಗಾಗಿ ಅದನ್ನು ಸ್ಫೂರ್ತಿದಾಯಕವಾಗಿಸಿಕೊಳ್ಳಬೇಕು~ ಎನ್ನುತ್ತಾರೆ ನಿರಂತರ ತಂಡದ ಕಲಾವಿದರು.<br /> <br /> `ನಿರಂತರ~ ಅನೇಕ ಜನಪರ ಹೋರಾಟಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಚಾಮಲಾಪುರ ಉಷ್ಣವಿದ್ಯುತ್ ಸ್ಥಾವರ ವಿರೋಧಿ ಚಳವಳಿಯಲ್ಲಿ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. <br /> <br /> ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥಾ ನಡೆಸಿದೆ. ಕರ್ನಾಟಕದಾದ್ಯಂತ ಬಸವಣ್ಣನ ವಚನಗಳನ್ನಾಧರಿಸಿದ ಮಹತ್ವಾಕಾಂಕ್ಷೆ `ಕೂಡಲಸಂಗಮ~ ದೃಶ್ಯರೂಪಕದ 75 ಪ್ರದರ್ಶನಗಳನ್ನು ನೀಡಿದೆ. <br /> <br /> ರೈತರ ಸಮಸ್ಯೆ ಕುರಿತಾದ ಬಾದಲ್ ಸರ್ಕಾರ್ ಅವರ `ಭೋಮ~ ನಾಟಕವನ್ನೂ ಯಶಸ್ವಿಯಾಗಿ ಪ್ರದರ್ಶಿಸಿರುವ ಹೆಗ್ಗಳಿಕೆಯೂ ಇದಕ್ಕಿದೆ. <br /> <br /> ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ ಹಾಗೂ ಬಾದಲ್ ಸರ್ಕಾರ್ ಅವರ ಪಿ.ಗಂಗಾಧರಸ್ವಾಮಿ ನಿರ್ದೇಶನದ `ಮೆರವಣಿಗೆ~ ನಾಟಕ ಪ್ರದರ್ಶನವೂ ನಿರಂತರದ ವೈಶಿಷ್ಟ್ಯಪೂರ್ಣ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. <br /> <br /> ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ `ಸಹಜರಂಗ~ ಎಂಬ ರಂಗತರಬೇತಿ ಶಿಬಿರವನ್ನೂ ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯನ್ನುಪರದೆಯಾಗಿಟ್ಟುಕೊಂಡು ನಮ್ಮತನದ, ನೆಲ, ಜಲ, ಜನಪದ, ಸಂಸ್ಕೃತಿಯನ್ನು ಹೊಸ ತಲೆಮಾರಿನೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನವೇ ಈ ಸಹಜರಂಗದ ಮುಖ್ಯ ಧ್ಯೇಯವಾಗಿದೆ. <br /> ಚೆನ್ನಕೇಶವ ನಿರ್ದೇಶನದ ಕಾವ್ಯಗಳನ್ನಾಧರಿಸಿದ `ಇದೆ...ಇತ್ತು...ಇರುತ್ತದೆ~ಯನ್ನು ಪ್ರದರ್ಶಿಸಿದೆ. <br /> <br /> ಖ್ಯಾತ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ಚೀನಿ ನಾಟಕಕಾರ ಲಾವೋಶೆಯವರ `ಟೀ ಹೌಸ್~ ನಾಟಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದೆ. <br /> <br /> ಅಂತರರಾಜ್ಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ನಿಟ್ಟಿನಲ್ಲಿ ಮಣಿಪುರದ ಕನ್ಹಯ್ಯಾಲಾಲ್ ಅವರ ಕಲಾಕ್ಷೇತ್ರ ತಂಡದ `ಬಿಜಲಿ ಪಪ್ಪೆಟ್~ ಹಾಗೂ ಛತ್ತೀಸ್ಗಡದ ಬಸ್ತಾರ್ ಬ್ಯಾಂಡ್ ಪ್ರದರ್ಶನವನ್ನೂ ಆಯೋಜಿಸಿ ಸೈ ಎನ್ನಿಸಿಕೊಂಡಿದೆ. <br /> <br /> ಭಿನ್ನವಿಭಿನ್ನ ನಾಟಕ ಹಾಗೂ ಪ್ರಯೋಗ ಶೈಲಿಯನ್ನು ಒಂದೆಡೆ ಪ್ರಯೋಗಿಸುವ ನಿರಂತರ ರಂಗ ಉತ್ಸವವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವುದು ಇದರ ಮತ್ತೊಂದು ವಿಶೇಷ. <br /> <br /> ಪರಿಸರ ಪಕ್ಷಿಗಳ ಅರಿವು ಮೂಡಿಸುವ ಮಕ್ಕಳ ಗೀತೆಗಳ `ಹಾರೋಣ ಬಾ~ ಪುಸ್ತಕ ಹೊರತರುವ ಮೂಲಕ ಶಿಶು ಸಾಹಿತ್ಯಕ್ಕೂ ತನ್ನ ಕೊಡುಗೆ ನೀಡಿದೆ.<strong> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>