ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್ ‘ಕೆಎಸ್ಎಫ್ಎ ಆಯ್ಕೆ ಸಮಿತಿ, ತಂಡದ ಆಯ್ಕೆ ವಿಚಾರದಲ್ಲಿ ಮೊದಲಿನಿಂದಲೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿದೆ. ಅರ್ಹತೆ ಇಲ್ಲದವರಿಗೆ ನಾವು ಯಾವತ್ತೂ ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ. ಟ್ರಯಲ್ಸ್ನಲ್ಲಿ ಮೂಡಿಬರುವ ಸಾಮರ್ಥ್ಯವನ್ನು ಮಾನದಂಡವಾಗಿಟ್ಟುಕೊಂಡು ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿಯೂ ಇದೇ ನಿಯಮ ಪಾಲಿಸಿದ್ದೇವೆ. ಇನ್ನೆರಡು ದಿನ ಗಳಲ್ಲಿ ಸಂತೋಷ್ ಟ್ರೋಫಿಗೆ ಅಂತಿಮ ತಂಡ ಪ್ರಕಟಿಸುತ್ತೇವೆ. ಅದರಲ್ಲಿ ಅನರ್ಹರು ಇದ್ದರೆ ನೇರವಾಗಿ ನನಗೆ ದೂರು ನೀಡಬಹುದು’ ಎಂದರು.