ಆಲ್ರೌಂಡರ್ ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ಯುವಪ್ರತಿಭೆ ಅಂಗಕ್ರಿಷ್ ರಘುವಂಶಿ ಕಳೆದ ಪಂದ್ಯಗಳಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ್ದಾರೆ. ಚೆನ್ನೈ ತಂಡದಲ್ಗಿ ವೇಗಿ ಮುಸ್ತಫಿಜುರ್ ರೆಹಮಾನ್ ಅವರಿಲ್ಲದಿರುವುದರಿಂದ ಬ್ಯಾಟರ್ಗಳನ್ನು ಕಟ್ಟಿಹಾಕಲು ವಿಭಿನ್ನ ತಂತ್ರ ಹೆಣೆಯಬೇಕಿದೆ. ತಂಡದ ನಿಕಟಪೂರ್ವ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಋತುರಾಜ್ಗೆ ನೀಡುವ ಸಲಹೆಗಳು ಇಲ್ಲಿ ಮುಖ್ಯವಾಗಲಿವೆ.