<p><strong>ಮುಂಬೈ:</strong> ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಒಂಬತ್ತು ವರ್ಷಗಳ ಹಿಂದೆ ಹೋಟೆಲ್ ಬಾಲ್ಕನಿಯಲ್ಲಿ ನೇತಾಡುವಂತೆ ಮಾಡಿದ್ದ ಆಟಗಾರನನ್ನು ನಿಷೇಧ ಶಿಕ್ಷೆಗೊಳಪಡಿಸಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಆಗ್ರಹಿಸಿದ್ದಾರೆ.</p>.<p>2013ರ ಐಪಿಎಲ್ನಲ್ಲಿ ತಾವು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದ ಘಟನೆಯನ್ನು ಚಾಹಲ್ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.</p>.<p>ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದ ನಂತರದ ಔತಣಕೂಟದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಮುಂಬೈ ತಂಡದ ಆಟಗಾರನೊಬ್ಬ ಚಾಹಲ್ ಅವರನ್ನು 15ನೇ ಮಹಡಿಯ ಬಾಲ್ಕನಿಯಿಂದ ನೇತಾಡುವಂತೆ ಮಾಡಿದ್ದ. ಅದರಿಂದಾಗಿ ತಾವು ಪ್ರಾಣಭಯ ಎದುರಿಸಿದ್ದಾಗಿ ಚಾಹಲ್ ಬಹಿರಂಗಪಡಿಸಿದ್ದರು. ಈ ವಿಷಯದ ಕುರಿತು ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಇದು ತಮಾಷೆಯ ಪ್ರಸಂಗವಲ್ಲ. ನಕ್ಕು ಮರೆಯುವಂತಿಲ್ಲ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಆತನ ಬುದ್ಧಿ ಸ್ಥಿಮಿತದಲ್ಲಿರಲಿಲ್ಲ ಎನ್ನುವುದು ಖಚಿತ. ಒಬ್ಬರ ಪ್ರಾಣಕ್ಕೆ ಕುತ್ತು ತಂದಿದ್ದು ಹೌದು. ಇದು ನಿಜಕ್ಕೂ ಗಂಭೀರವಾದ ವಿಷಯ‘ ಎಂದು ಶಾಸ್ತ್ರಿ ಇಎಸ್ಪಿಎನ್ ಕ್ರಿಕ್ಇನ್ಫೋ ವೆಬ್ಸೈಟ್ನಲ್ಲಿ ಹೇಳಿದ್ದಾರೆ.</p>.<p>‘ಇಂತಹ ಘಟನೆಯ ಕುರಿತು ನನ್ನ ಜೀವನದಲ್ಲಿ ಮೊದಲ ಬಾರಿ ಕೇಳಿದ್ದೇನೆ. ಈಗ ಇಂತಹ ಘಟನೆ ನಡೆದಿದ್ದರೆ ತಪ್ಪಿತಸ್ಥನಿಗೆ ಜೀವಮಾನ ನಿಷೇಧ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಘಟನೆಯನ್ನೂ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಆಟಗಾರನನ್ನು ನಿಷೇಧಿಸಬೇಕು. ಆತನ ಮಾನಸಿಕ ಸ್ಥಿತಿ ಸುಧಾರಣೆಗೆ ಪುನಶ್ಚೇತನ ಶಿಬಿರಕ್ಕೆ ಕಳುಹಿಸಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ.</p>.<p>‘ಚಾಹಲ್ ಪ್ರಕರಣವು ಎಲ್ಲರಿಗೂ ಪಾಠವಾಗಬೇಕು. ಇಂತಹ ಘಟನೆಗಳು ನಡೆದಾಗ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಆಟಗಾರರು ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದಾಗ ಭ್ರಷ್ಟಾಚಾರ ತಡೆ ಘಟಕಕ್ಕೆ ತಿಳಿಸುವ ಮಾದರಿಯಲ್ಲಿಯೇ ಇಂತಹ ಪ್ರಕರಣಗಳಲ್ಲಿ ಕೂಡ ಜಾಗರೂಕತೆ ವಹಿಸಬೇಕು‘ ಎಂದರು.</p>.<p>ಈ ವರ್ಷ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಚಾಹಲ್ ಆಡುತ್ತಿದ್ದಾರೆ. ಅವರು ತಂಡದ ಯುಟ್ಯೂಬ್ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಹ ಆಟಗಾರರಾದ ಆರ್. ಆಶ್ವಿನ್ ಮತ್ತು ಕರುಣ್ ನಾಯರ್ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಒಂಬತ್ತು ವರ್ಷಗಳ ಹಿಂದೆ ಹೋಟೆಲ್ ಬಾಲ್ಕನಿಯಲ್ಲಿ ನೇತಾಡುವಂತೆ ಮಾಡಿದ್ದ ಆಟಗಾರನನ್ನು ನಿಷೇಧ ಶಿಕ್ಷೆಗೊಳಪಡಿಸಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಆಗ್ರಹಿಸಿದ್ದಾರೆ.</p>.<p>2013ರ ಐಪಿಎಲ್ನಲ್ಲಿ ತಾವು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದ ಘಟನೆಯನ್ನು ಚಾಹಲ್ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.</p>.<p>ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದ ನಂತರದ ಔತಣಕೂಟದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಮುಂಬೈ ತಂಡದ ಆಟಗಾರನೊಬ್ಬ ಚಾಹಲ್ ಅವರನ್ನು 15ನೇ ಮಹಡಿಯ ಬಾಲ್ಕನಿಯಿಂದ ನೇತಾಡುವಂತೆ ಮಾಡಿದ್ದ. ಅದರಿಂದಾಗಿ ತಾವು ಪ್ರಾಣಭಯ ಎದುರಿಸಿದ್ದಾಗಿ ಚಾಹಲ್ ಬಹಿರಂಗಪಡಿಸಿದ್ದರು. ಈ ವಿಷಯದ ಕುರಿತು ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಇದು ತಮಾಷೆಯ ಪ್ರಸಂಗವಲ್ಲ. ನಕ್ಕು ಮರೆಯುವಂತಿಲ್ಲ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಆತನ ಬುದ್ಧಿ ಸ್ಥಿಮಿತದಲ್ಲಿರಲಿಲ್ಲ ಎನ್ನುವುದು ಖಚಿತ. ಒಬ್ಬರ ಪ್ರಾಣಕ್ಕೆ ಕುತ್ತು ತಂದಿದ್ದು ಹೌದು. ಇದು ನಿಜಕ್ಕೂ ಗಂಭೀರವಾದ ವಿಷಯ‘ ಎಂದು ಶಾಸ್ತ್ರಿ ಇಎಸ್ಪಿಎನ್ ಕ್ರಿಕ್ಇನ್ಫೋ ವೆಬ್ಸೈಟ್ನಲ್ಲಿ ಹೇಳಿದ್ದಾರೆ.</p>.<p>‘ಇಂತಹ ಘಟನೆಯ ಕುರಿತು ನನ್ನ ಜೀವನದಲ್ಲಿ ಮೊದಲ ಬಾರಿ ಕೇಳಿದ್ದೇನೆ. ಈಗ ಇಂತಹ ಘಟನೆ ನಡೆದಿದ್ದರೆ ತಪ್ಪಿತಸ್ಥನಿಗೆ ಜೀವಮಾನ ನಿಷೇಧ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಘಟನೆಯನ್ನೂ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಆಟಗಾರನನ್ನು ನಿಷೇಧಿಸಬೇಕು. ಆತನ ಮಾನಸಿಕ ಸ್ಥಿತಿ ಸುಧಾರಣೆಗೆ ಪುನಶ್ಚೇತನ ಶಿಬಿರಕ್ಕೆ ಕಳುಹಿಸಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ.</p>.<p>‘ಚಾಹಲ್ ಪ್ರಕರಣವು ಎಲ್ಲರಿಗೂ ಪಾಠವಾಗಬೇಕು. ಇಂತಹ ಘಟನೆಗಳು ನಡೆದಾಗ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಆಟಗಾರರು ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದಾಗ ಭ್ರಷ್ಟಾಚಾರ ತಡೆ ಘಟಕಕ್ಕೆ ತಿಳಿಸುವ ಮಾದರಿಯಲ್ಲಿಯೇ ಇಂತಹ ಪ್ರಕರಣಗಳಲ್ಲಿ ಕೂಡ ಜಾಗರೂಕತೆ ವಹಿಸಬೇಕು‘ ಎಂದರು.</p>.<p>ಈ ವರ್ಷ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಚಾಹಲ್ ಆಡುತ್ತಿದ್ದಾರೆ. ಅವರು ತಂಡದ ಯುಟ್ಯೂಬ್ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಹ ಆಟಗಾರರಾದ ಆರ್. ಆಶ್ವಿನ್ ಮತ್ತು ಕರುಣ್ ನಾಯರ್ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>