ನವದೆಹಲಿ: ’ಶ್ರೀರಾಮನು ಎಲ್ಲರಲ್ಲೂ ಒಳ್ಳೆಯದನ್ನು ಕಂಡ. ದ್ವೇಷಕ್ಕೆ ಆಸ್ಪದ ಕೊಡಲಿಲ್ಲ. ಅಲಹಾಬಾದ್ನಲ್ಲಿ ಹುಟ್ಟಿದ ನಾನು ಗಂಗಾ–ಜಮುನಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡೇ ಬೆಳೆದಿದ್ದೇನೆ. ಹಲವು ವರ್ಷಗಳಿಂದ ರಾಮಲೀಲಾ ನೋಡುತ್ತ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣ ಕಲಿತಿದ್ದೇನೆ‘–
ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರ ಟ್ವೀಟ್ ಸಂದೇಶ ಇದು. ಅಯೋಧ್ಯೆಯಲ್ಲಿ ಬುಧವಾರ ರಾಮಮಂದಿರ ಶಿಲಾನ್ಯಾಸ ನಡೆದ ಬಗ್ಗೆ ಹಲವು ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಅವರಲ್ಲಿ ಉತ್ತರಪ್ರದೇಶದ ಕೈಫ್ ಕೂಡ ಒಬ್ಬರು.
’ಸಂಸ್ಕೃತಿ, ಸಭ್ಯತೆ, ಶಾಂತಿ ಮತ್ತು ಸಹಬಾಳ್ವೆಯನ್ನು ರಾಮನಿಂದ ಕಲಿಯಬೇಕು. ದ್ವೇಷ ಬಿತ್ತುವ ದುಷ್ಕರ್ಮಿಗಳಿಗೆ ಆಸ್ಪದ ಕೊಡಬೇಡಿ. ಸದಾ ಪ್ರೀತಿ ಮತ್ತು ಏಕತೆಯಿಂದ ಬಾಳೋಣ‘ ಎಂದು ಕೈಫ್ ಬರೆದಿದ್ದಾರೆ.
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ’ಇವತ್ತು ಉತ್ಸವದ ದಿನ. ಇತಿಹಾಸದ ಪುಸ್ತಕಗಳಲ್ಲಿ ಸದಾ ಕಾಲ ದಾಖಲಾಗುವಂತಹ ದಿನ ಇದು. ರಾಮಮಂದಿರದ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು‘ ಎಂದು ಟ್ವೀಟ್ ಮಾಡಿದ್ದಾರೆ.
Growing up in Allahabad,a city with Ganga-Jamuna culture,I loved watching Ramlila-a tale of compassion,co-exsistence,honour and dignity.Lord Ram saw goodness in everyone and our conduct should reflect his legacy.Don’t allow the agents of hate to come in the way of love and unity.