ಪಟಿಯಾಲ: ಕರ್ನಾಟಕ ತಂಡ ಇಲ್ಲಿ ಸೋಮವಾರ ಆರಂಭಗೊಂಡ ಪಂಜಾಬ್ ಎದುರಿನ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 66 ರನ್ ಗಳಿಸಿದ್ದಾಗ ಮಂದ ಬೆಳಕಿನ ಕಾರಣ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್ಗಳಲ್ಲಿ 2ಕ್ಕೆ 66 (ಅಂಕಿತ್ ಉಡುಪ 0, ಶಿವಕುಮಾರ್ ಬಿ.ಯು 28, ಎನ್.ಜಯೇಶ್ ಬ್ಯಾಟಿಂಗ್ 37, ಲವನೀತ್ ಸಿಸೋಡಿಯಾ ಬ್ಯಾಟಿಂಗ್ 1; ಇಕ್ಜೋತ್ ಸಿಂಗ್ 14ಕ್ಕೆ1, ನರ್ವಿಂದರ್ ಭುಲ್ಲರ್ 11ಕ್ಕೆ1). ಪಂಜಾಬ್ ಎದುರಿನ ಪಂದ್ಯ.