<figcaption>""</figcaption>.<p><strong>ಢಾಕಾ:</strong>19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಸಾಧಿಸಿರುವಬಾಂಗ್ಲಾದೇಶದ ಆಟಗಾರರು, ತಮ್ಮ ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟು ಸಂಭ್ರಮಿಸಿದ್ದಾರೆ. ಆದರೆ,ಉಳಿದೆಲ್ಲ ಆಟಗಾರರು ಕೇವಲ ಎದುರಾಳಿ ತಂಡದ ಆಟಗಾರರೊಂದಿಗೆ ಮಾತ್ರವೇ ಸೆಣಸುತ್ತಿದ್ದರೆ, ತಂಡ ಮುನ್ನಡೆಸಿದ್ದ 18 ವರ್ಷ ಅಕ್ಬರ್ ಅಲಿಮಾತ್ರ ತಮ್ಮ ಅಕ್ಕನ ಸಾವಿನ ನೋವಿನೊಂದಿಗೂ ಸೆಣಸಿ ಚಾಂಪಿಯನ್ ಎನಿಸಿದ್ದಾರೆ.</p>.<p>ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ‘ಪ್ರೊಥೋಮ್ ಅಲೊ’ ಮಾಡಿರುವ ವರದಿ ಪ್ರಕಾರ, ಅಕ್ಬರ್ ಅಲಿಯ ಹಿರಿಯ ಸಹೋದರಿ ಖಾದಿಜಾ ಖಾತುನ ಜನವರಿ 22 ರಂದು ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಸಿದರೆ, ಮಗನ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದೆಣಿಸಿದ್ದ ಕುಟುಂಬದವರು,ಆತ ಮನೆಗೆ ಮರಳಿದ ನಂತರ ತಿಳಿಸುವ ಆಲೋಚನೆಯಲ್ಲಿದ್ದರು.</p>.<p>ಆದರೆ, ಅಕ್ಬರ್ ತಮ್ಮಸಹೋದರನಿಂದ ವಿಷಯ ತಿಳಿದುಕೊಂಡು ದುಃಖಿಸಿದ್ದರು.</p>.<p>ಈ ಬಗ್ಗೆ ಮಾತನಾಡಿರುವ ಅಕ್ಬರ್ ತಂದೆ,‘ಅಲಿಯನ್ನು ಅವನ ಅಕ್ಕ ತುಂಬಾ ಪ್ರೀತಿಸುತ್ತಿದ್ದಳು. ಅವನೂ ಬಹಳ ಹಚ್ಚಿಕೊಂಡಿದ್ದ. ಹೀಗಾಗಿ ಈ ವಿಷಯವನ್ನು ಆತನಿಗೆ ಹೇಗೆ ತಿಳಿಸಬೇಕು ಎಂಬುದೇ ನಮಗೆ ಗೊತ್ತಾಗಿರಲಿಲ್ಲ. ಅಷ್ಟು ಧೈರ್ಯವೂ ನಮಗಿರಲಿಲ್ಲ’ ಎಂದಿದ್ದಾರೆ.</p>.<p>ಮುಂದುವರಿದು,‘ಅವನಿಗೆ ಇದನ್ನು ಹೇಳುವುದು ನಮಗೆ ಇಷ್ಟವಿರಲಿಲ್ಲ. ಆದರೆ, ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯ ಮುಗಿದ ಬಳಿಕ ಕರೆ ಮಾಡಿದ್ದ ಅವನು ತನ್ನ ಸೋದರನಿಂದ ವಿಚಾರ ತಿಳಿದುಕೊಂಡಿದ್ದ’ ಎಂದು ಬೇಸರ ಪಟ್ಟುಕೊಂಡಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/icc-has-taken-bangladesh-aggressive-celebrations-very-seriously-indian-team-manager-anil-patel-bcci-704288.html" target="_blank">ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’ </a></p>.<p>ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಜನವರಿ 24 ರಂದು ನಡೆದಿತ್ತು.</p>.<p>ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 177 ರನ್ ಗಳಿಗೆ ಕುಸಿದಿತ್ತು.ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.</p>.<p>ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್ ಜಯ ಘೋಷಿಸಲಾಯಿತು.</p>.<p>ಬಾಂಗ್ಲಾದೇಶ ಇದುವರೆಗೆ ಐಸಿಸಿಯ ಯಾವುದೇ ಟ್ರೋಫಿಗಳನ್ನು ಗೆದ್ದಿರಲಿಲ್ಲ. ಹಾಗಾಗಿ ಈ ಪ್ರಶಸ್ತಿಯು ಬಾಂಗ್ಲಾದೇಶದ ಕ್ರಿಕೆಟ್ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ ಆಗುತ್ತಿದ್ದಂತೆ ಸಾರ್ವಜನಿಕ ಸಮಾರಂಭದ ಮೂಲಕತಂಡವನ್ನು ಸ್ವಾಗತಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.</p>.<figcaption><strong>ಟ್ರೋಫಿಯೊಂದಿಗೆ ಬಾಂಗ್ಲಾದೇಶ ತಂಡ</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಢಾಕಾ:</strong>19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಸಾಧಿಸಿರುವಬಾಂಗ್ಲಾದೇಶದ ಆಟಗಾರರು, ತಮ್ಮ ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟು ಸಂಭ್ರಮಿಸಿದ್ದಾರೆ. ಆದರೆ,ಉಳಿದೆಲ್ಲ ಆಟಗಾರರು ಕೇವಲ ಎದುರಾಳಿ ತಂಡದ ಆಟಗಾರರೊಂದಿಗೆ ಮಾತ್ರವೇ ಸೆಣಸುತ್ತಿದ್ದರೆ, ತಂಡ ಮುನ್ನಡೆಸಿದ್ದ 18 ವರ್ಷ ಅಕ್ಬರ್ ಅಲಿಮಾತ್ರ ತಮ್ಮ ಅಕ್ಕನ ಸಾವಿನ ನೋವಿನೊಂದಿಗೂ ಸೆಣಸಿ ಚಾಂಪಿಯನ್ ಎನಿಸಿದ್ದಾರೆ.</p>.<p>ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ‘ಪ್ರೊಥೋಮ್ ಅಲೊ’ ಮಾಡಿರುವ ವರದಿ ಪ್ರಕಾರ, ಅಕ್ಬರ್ ಅಲಿಯ ಹಿರಿಯ ಸಹೋದರಿ ಖಾದಿಜಾ ಖಾತುನ ಜನವರಿ 22 ರಂದು ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಸಿದರೆ, ಮಗನ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದೆಣಿಸಿದ್ದ ಕುಟುಂಬದವರು,ಆತ ಮನೆಗೆ ಮರಳಿದ ನಂತರ ತಿಳಿಸುವ ಆಲೋಚನೆಯಲ್ಲಿದ್ದರು.</p>.<p>ಆದರೆ, ಅಕ್ಬರ್ ತಮ್ಮಸಹೋದರನಿಂದ ವಿಷಯ ತಿಳಿದುಕೊಂಡು ದುಃಖಿಸಿದ್ದರು.</p>.<p>ಈ ಬಗ್ಗೆ ಮಾತನಾಡಿರುವ ಅಕ್ಬರ್ ತಂದೆ,‘ಅಲಿಯನ್ನು ಅವನ ಅಕ್ಕ ತುಂಬಾ ಪ್ರೀತಿಸುತ್ತಿದ್ದಳು. ಅವನೂ ಬಹಳ ಹಚ್ಚಿಕೊಂಡಿದ್ದ. ಹೀಗಾಗಿ ಈ ವಿಷಯವನ್ನು ಆತನಿಗೆ ಹೇಗೆ ತಿಳಿಸಬೇಕು ಎಂಬುದೇ ನಮಗೆ ಗೊತ್ತಾಗಿರಲಿಲ್ಲ. ಅಷ್ಟು ಧೈರ್ಯವೂ ನಮಗಿರಲಿಲ್ಲ’ ಎಂದಿದ್ದಾರೆ.</p>.<p>ಮುಂದುವರಿದು,‘ಅವನಿಗೆ ಇದನ್ನು ಹೇಳುವುದು ನಮಗೆ ಇಷ್ಟವಿರಲಿಲ್ಲ. ಆದರೆ, ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯ ಮುಗಿದ ಬಳಿಕ ಕರೆ ಮಾಡಿದ್ದ ಅವನು ತನ್ನ ಸೋದರನಿಂದ ವಿಚಾರ ತಿಳಿದುಕೊಂಡಿದ್ದ’ ಎಂದು ಬೇಸರ ಪಟ್ಟುಕೊಂಡಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/icc-has-taken-bangladesh-aggressive-celebrations-very-seriously-indian-team-manager-anil-patel-bcci-704288.html" target="_blank">ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’ </a></p>.<p>ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಜನವರಿ 24 ರಂದು ನಡೆದಿತ್ತು.</p>.<p>ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 177 ರನ್ ಗಳಿಗೆ ಕುಸಿದಿತ್ತು.ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.</p>.<p>ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್ ಜಯ ಘೋಷಿಸಲಾಯಿತು.</p>.<p>ಬಾಂಗ್ಲಾದೇಶ ಇದುವರೆಗೆ ಐಸಿಸಿಯ ಯಾವುದೇ ಟ್ರೋಫಿಗಳನ್ನು ಗೆದ್ದಿರಲಿಲ್ಲ. ಹಾಗಾಗಿ ಈ ಪ್ರಶಸ್ತಿಯು ಬಾಂಗ್ಲಾದೇಶದ ಕ್ರಿಕೆಟ್ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ ಆಗುತ್ತಿದ್ದಂತೆ ಸಾರ್ವಜನಿಕ ಸಮಾರಂಭದ ಮೂಲಕತಂಡವನ್ನು ಸ್ವಾಗತಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.</p>.<figcaption><strong>ಟ್ರೋಫಿಯೊಂದಿಗೆ ಬಾಂಗ್ಲಾದೇಶ ತಂಡ</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>